Connect with us

    LATEST NEWS

    ಬಾಲಿವುಡ್ ನಟಿ ‘ಕಾದಂಬರಿ ಜೇತ್ವಾನಿ’ಗೆ ಬಂಧಿಸಿ ಕಿರುಕುಳ, ಮೂವರು IPS ಅಧಿಕಾರಿಗಳು ಸಸ್ಪೆಂಡ್…!!!

    ಹೈದರಾಬಾದ್: ತರಾತುರಿಯಲ್ಲಿ ಮುಂಬೈ ಮೂಲದ ಬಾಲಿವುಡ್ ನಟಿ, ಹಾಗೂ ರೂಪದರ್ಶಿ ಕಾದಂಬರಿ ಜೆಟ್ವಾನಿ (kadambari jethwani) ಯವರನ್ನು ಬಂಧಿಸಿ ಕಿರುಕುಳ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರು ಐಪಿಎಸ್ ಅಧಿಕಾರಿಗಳನ್ನು ಆಂಧ್ರ ಪ್ರದೇಶ ಸರ್ಕಾರ ಅಮಾನತು ಮಾಡಿದೆ.
     
    ಹಿರಿಯ ಐಪಿಎಸ್ ಅಧಿಕಾರಿಗಳಾದ ಪಿ. ಸೀತಾರಾಮ ಆಂಜನೆಯಲು, ಕ್ರಾಂತಿ ರಾಣಾ ಟಾಟಾ ಹಾಗೂ ಐಪಿಎಸ್ ಅಧಿಕಾರಿ, ವಿಜಯವಾಡದ ಮಾಜಿ ಡಿಸಿಪಿ ವಿಶಾಲ್ ಗುನ್ನಿ ಅವರನ್ನು ಶನಿವಾರ ಅಮಾನತುಗೊಳಿಸಿ ಆಂಧ್ರಪ್ರದೇಶ ಸರ್ಕಾರ ಆದೇಶಿಸಿದೆ.
    ನಟಿ ಹಾಗೂ ಮಾಡೆಲ್ ಕಾದಂಬರಿ ಜೆಟ್ವಾನಿ ಎನ್ನುವರು ತಮಗೆ ವಂಚಿಸಿದ್ದಾರೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಫೆಬ್ರುವರಿ 2 ರಂದು ಆಂಧ್ರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಭಾಗವಾಗಿ ಪಿ. ಸೀತಾರಾಮ ಆಂಜನೆಯಲು ಅವರು ಕಾದಂಬರಿ ಅವರನ್ನು ಬಂಧಿಸಲು ತಮ್ಮ ಅಧೀನದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕಾಡಂಬರಿ ಜೇಟ್ವಾಣಿ ಅವರು ತಮ್ಮನ್ನು ಬಂಧಿಸುವ ಹಿಂದೆ ರಾಜಕೀಯ ಪ್ರಭಾವವೂ ಇತ್ತು ಎಂದು ಹೇಳಿದ್ದಾರೆ .
    ಆದರೆ, ಕಾದಂಬರಿ ತಮ್ಮ ಬಂಧನ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಕುರಿತು ಇಲಾಖಾ ತನಿಖೆ ನಡೆಸಿದಾಗ ಸೀತಾರಾಮ ಆಂಜನೆಯಲು, ಕಾಂತಿ ರಾಣಾ ಟಾಟಾ ಹಾಗೂ ವಿಶಾಲ್ ಗುನ್ನಿ ತಪ್ಪಿತಸ್ಥರೆಂದು ತಿಳಿದು ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
    Share Information
    Advertisement
    Click to comment

    You must be logged in to post a comment Login

    Leave a Reply