Connect with us

    DAKSHINA KANNADA

    ಬಜರಂಗದಳ‌ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರಿಗೆ ಪುತ್ತೂರಿನಲ್ಲಿ ಭರ್ಜರಿ ಸ್ವಾಗತ

    ಪುತ್ತೂರು ಮಾರ್ಚ್ 06: ತುಮಕೂರಿನಲ್ಲಿ ಭಯೋತ್ಪಾದನಾ ವಿರೋಧಿ ಹೋರಾಟಕ್ಕೆ ತೆರಳುತ್ತಿದ್ದ ಬಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕ‌ ಮುರಳಿಕೃಷ್ಣ ಹಸಂತಡ್ಕ ಅವರು ಬಿಡುಗಡೆಗೊಂಡು ಪುತ್ತೂರಿಗೆ ಆಗಮಿಸಿದಾಗ ಕಾರ್ಯಕರ್ತರು ಅವರಿಗೆ ಭರ್ಜರಿ ಸ್ವಾಗತ ನೀಡಿದರು.


    ಮುರಳಿಕೃಷ್ಣ ಹಸಂತಡ್ಕ ಅವರು ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಎದುರು ಕಾರಿನಿಂದ ಇಳಿದು ಆಂಜನೇಯ ಸ್ವಾಮಿಗೆ ನಮಸ್ಕರಿಸಿ ಕಾರ್ಯಕರ್ತರಿಂದ ಶಲ್ಯ, ಹಾರವನ್ನು ಪಡೆದು ಕೊಂಡರು. ಮುರಳುಕೃಷ್ಣ ಹಸಂತಡ್ಕ ಅವರ ಜೊತೆಗಿದ್ದ ವಿಹಿಂಪದ ಜಯಂತ್‌ ಕುಂಜೂರುಪಂಜ ಅವರಿಗೂ ಶಲ್ಯ ಹಾಕಿ ಸ್ವಾಗತಿಸಲಾಯಿತು.


    ಈ ವೇಳೆ ಮಾತನಾಡಿದ ಅವರು ನನ್ನ ಮೇಲೆ ಯಾವುದೇ ಪ್ರಕರಣ ಇರಲಿಲ್ಲ. ಆದರೆ ನನನ್ನು ರೌಡಿಗಳನ್ನು ಅರೆಸ್ಟ್ ಮಾಡುವಂತೆ ನನ್ನನ್ನು ವಶಕ್ಕೆ ಪಡೆದಿದ್ದರು. ಹಿಂದೂ ಸಂಘಟನೆಗಳನ್ನು ಧಮನಿಸಲು ಹೊರಟರೆ ಅಧಿಕಾರಿಗಳಿಗೆ ಎಚ್ಚರಿಕೆ ಇರಬೇಕಾಗುತ್ತದೆ. ರಾಜ್ಯದ ಜನತೆ ತಕ್ಕದಾದ ಉತ್ತರ ಕೊಡುತ್ತಾರೆ. ರಾಜ್ಯ ಸರಕಾರದ ಅತ್ಯಂತ ನಾಚೀಕೆಗೇಡಿನಿಂದ ವರ್ತಿಸುತ್ತಿದ್ದು, ಇದಕ್ಕೆ ಉತ್ತರವನ್ನು ಗೃಹ ಸಚಿವರು ನೀಡಬೇಕು ಎಂದು ಒತ್ತಾಯಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply