Connect with us

    DAKSHINA KANNADA

    ಅಕ್ಷಯ್ ಕಲ್ಲೇಗ ಶವಯಾತ್ರೆಗೆ ಪೊಲೀಸರ ತಡೆ – ಮಾತಿನ ಚಕಮಕಿ

    ಪುತ್ತೂರು ನವೆಂಬರ್ 07: ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಅಕ್ಷಯ್ ಕಲ್ಲೇಗ ಅವರ ಶವಯಾತ್ರೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ನಿನ್ನೆ ತಡರಾತ್ರಿ ಪುತ್ತೂರು ಪೇಟೆಯ ಹೊರ ವಲಯ ನೆಹರುನಗರದಲ್ಲಿ ಅಕ್ಷಯ್ ಕಲ್ಲೇಗ ಎಂಬ ಯುವಕನನ್ನು ದುಷ್ಕರ್ಮಿಗಳ ತಂಡವೊಂದು ತಲವಾರು ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು.


    ಇಂದು ಅಕ್ಷಯ್ ಕಲ್ಲೇಗ ಅವರ ಗೆಳೆಯರು ಹಾಗೂ ಸ್ಥಳೀಯ ಯುವರು ಅಕ್ಷಯ್ ಕಲ್ಲೇಗ ಶವಯಾತ್ರೆಗೆ ಸಿದ್ಧತೆ ನಡೆಸಿದ್ದರು. ಪುತ್ತೂರಿನ ಕಬಕ ವೃತ್ತದಿಂದ ನಗರದ ಶೇವಿರೆಯಲ್ಲಿರುವ ಮನೆವರೆಗೆ ಶವಯಾತ್ರೆಗೆ ಯುವಕರು ಸಿದ್ಧತೆ ಮಾಡಿಕೊಂಡಿದ್ದರು, ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಈ ವೇಳೆ ಶವಯಾತ್ರೆ ಮಾಡದಂತೆ ಪೊಲೀಸರು ತಡೆಯೊದ್ದಿದ್ದರು. ಈ ಸಂದರ್ಭ ಪೊಲೀಸರು ಹಾಗೂ ಯುವಕರ ಮಡುವೆ ಮಾತಿನ ಚಕಮಕಿ ನಡೆದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply