Connect with us

LATEST NEWS

ಕೊಲೆ ದರೋಡೆಗೆ ಸಂಚು ನಾಲ್ವರು ಆರೋಪಿಗಳ ಬಂಧನ

ಕೊಲೆ ದರೋಡೆಗೆ ಸಂಚು ನಾಲ್ವರು ಆರೋಪಿಗಳ ಬಂಧನ

ಮಂಗಳೂರು ಫೆಬ್ರವರಿ 3: ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದಾರೆ ಎನ್ನಲಾದ ನಾಲ್ವರು ಆರೋಪಿಗಳನ್ನು ಅಪರಾಧ ಪತ್ತೆದಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮನೋಜ್ ಕುಮಾರ್, ಪ್ರಸಾದ್ ಯಾನೆ ಪಚ್ಚು, ಶ್ರವಣ್, ಸುಜಿತ್ ಎಂದು ಗುರುತಿಸಲಾಗಿದೆ. ನಗರದ ಪಳ್ನೀರ್ ಎಂಬಲ್ಲಿ ಸುಮಾರು 9 ರಿಂದ 10 ಮಂದಿ ಟಾಟಾ ಸುಮೋ ಕಾರಿನಲ್ಲಿ ದರೋಡೆಗೆ ಸಂಚು ರೂಪಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ತಲವಾರು, ಮಚ್ಚು, ಚೂರಿ , 3 ಮೊಬೈಲ್ ಪೊನ್ ಸೇರಿದಂತೆ 40 ಗ್ರಾಂ ಗಾಂಜಾ ಹಾಗೂ ಟಾಟಾ ಸುಮೋ ಕಾರನ್ನು ವಶಪಡಸಿಕೊಳ್ಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *