Connect with us

    KARNATAKA

    ಒಂದು ಬೊಲೆರೊ ವಾಹನದಲ್ಲಿ 15 ಗೋವುಗಳ ಹಿಂಸಾತ್ಮಾಕ ಸಾಗಾಟ : ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು..!

    ರಾಯಚೂರು: ಮಹೀಂದ್ರಾ ಬೊಲೆರೊ ವಾಹನದಲ್ಲಿ 15 ಗೋವುಗಳನ್ನು ಹಿಂಸಾತ್ಮಾಕವಾಗಿ  ಸಾಗಾಟ (Cattle Transportation) ಮಾಡುತ್ತಿರುವುದನ್ನು ಹಿಂದೂ ಕಾರ್ಯಕರ್ತರು (Hindu Activists) ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

    ರಾಯಚೂರಿನ (Raichur) ಲಿಂಗಸುಗೂರಿನ ಗುರಗುಂಟಾದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಹಿಂದೂ ಪರ ಕಾರ್ಯಕರ್ತರು ಬೆಳಗ್ಗಿನ ಜಾವ 3 ರ ಸುಮಾರಿಗೆ ವಾಹನ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದರ ಮೇಲೆ ಒಂದು ಹಸುಗಳನ್ನು (Cow) ಹಾಕಿ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ  ಸಾಗಾಣಿಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಕಾರ್ಯಕರ್ತರು ವಾಹನ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸುರಪೂರು, ಯಾದಗಿರಿ ಹಾಗೂ ಕಲಬುರಗಿಯಿಂದ ನಿರಂತರ ಗೋವುಗಳ ಅಕ್ರಮ ಸಾಗಾಟ ನಡೆಯುತ್ತಿದ್ದು, ಗೋವುಗಳಿಗೆ ಚಿತ್ರಹಿಂಸೆ ನೀಡಿ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಹಟ್ಟಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ವಾಹನ ಜಪ್ತಿ ಮಾಡಿ ಗೋವುಗಳನ್ನು ರಕ್ಷಿಸಿದ್ದಾರೆ.

    ಇನ್ನು ಬೊಲೆರೊ ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಪ್ರಕರಣ ತನಿಖೆಯನ್ನು. ಹಟ್ಟಿ ಪೊಲೀಸರು ಮುಂದುವರೆಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply