KARNATAKA
ಗ್ರಾಹಕ ಸೋಗಲ್ಲಿ ಬಂದು 75 ಲಕ್ಷ ರೂ. ಮೌಲ್ಯದ ವಜ್ರದ ಉಂಗುರಕ್ಕೆ ಕೈಕೊಟ್ಟ ಖದೀಮ..!
ಬೆಂಗಳೂರು : ಗ್ರಾಹಕನ ಸೋಗಲ್ಲಿ ಬಂದ ಖದೀಮ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 75 ಲಕ್ಷ ರೂ. ಮೌಲ್ಯದ ವಜ್ರದ ಉಂಗುರದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಎಂ.ಜಿ.ರಸ್ತೆಯ ಜೋಯ್ ಅಲುಕಾಸ್ ಆಭರಣ ಮಳಿಗೆಯಲ್ಲಿ ಈ ಘಟನೆ ನಡೆದಿದೆ. ಗ್ರಾಹಕನ ಸೋಗಿನಲ್ಲಿ ಬಂದಿದ್ದ ಕಳ್ಳ, ಆಭರಣ ನೋಡುವ ನೆಪದಲ್ಲಿ ಸಿಬ್ಬಂದಿಗೆ ತಿಳಿಯದಂತೆ ನಕಲಿ ಉಂಗುರ ಇರಿಸಿ ಅಸಲಿ ವಜ್ರದ ಉಂಗುರವನ್ನು ಕಳವು ಮಾಡಿದ್ದಾನೆ. ಬಳಿಕ ಆಭರಣ ಹಿಡಿಸದವನಂತೆ ನಿಧಾನವಾಗಿ ಎದ್ದು ಜಾಗ ಖಾಲಿ ಮಾಡಿದ್ದಾನೆ. ಮರುದಿನ ಆಭರಣಗಳನ್ನು ಪರಿಶೀಲಿಸುವಾಗ ಉಂಗುರ ನಕಲಿ ಇರುವುದು ಪತ್ತೆಯಾಗಿದೆ. ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಕಳ್ಳತನದ ಕೃತ್ಯ ಬಯಲಾಗಿದೆ. ಸದ್ಯ ಆಭರಣ ಮಳಿಗೆಯ ಪ್ರತಿನಿಧಿ ನೀಡಿರುವ ದೂರಿನನ್ವಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯು ಅದೇ ಮಾದರಿಯಲ್ಲಿ ನಗರದ ಕೆಲವೆಡೆ ಇಂತಹುದೇ ಕೃತ್ಯ ಎಸಗಿರುವುದು ಕಂಡು ಬಂದಿದ್ದು ಆತನ ಬಂಧನಕ್ಕೆಜಾಲ ಬೀಸಲಾಗಿದೆ.
You must be logged in to post a comment Login