Connect with us

    LATEST NEWS

    ಸರ್ಕಾರಿ ಕಚೇರಿಗಳ ದೈನಂದಿನ ಆಡಳಿತದಲ್ಲಿ ಮತದಾನ ಜಾಗೃತಿ

    ಸರ್ಕಾರಿ ಕಚೇರಿಗಳ ದೈನಂದಿನ ಆಡಳಿತದಲ್ಲಿ ಮತದಾನ ಜಾಗೃತಿ

    ಉಡುಪಿ, ಏಪ್ರಿಲ್ 2: ಉಡುಪಿ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ದೈನಂದಿನ ಆಡಳಿತ ವ್ಯವಹಾರಗಳಲ್ಲಿ , ಮತದಾನ ಕುರಿತು ಜಾಗೃತಿ ಮೂಡಿಸುವ ಕುರಿತಂತೆ ವಿನೂತನ ಪ್ರಯತ್ನವನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಜಾರಿಗೆ ತಂದಿದ್ದಾರೆ.

    ಸಾಮಾನ್ಯವಾಗಿ ಸರಕಾರಿ ಕಚೇರಿಗಳಿಗೆ , ಸಾರ್ವಜನಿಕರು ಯಾವುದೇ ಪತ್ರ ನೀಡಿದಲ್ಲಿ, ಅದನ್ನು ಸ್ವೀಕರಿಸಿದ ಕುರಿತು, ಸಾರ್ವಜನಿಕರಿಗೆ ಸ್ವೀಕೃತಿ / ಹಿಂಬರಹ ನೀಡಲಾಗುತ್ತಿದೆ, ಈ ಸ್ವೀಕೃತಿಯಲ್ಲಿ ಇಲಾಖೆಯ ಹೆಸರು ಮತ್ತು ದಿನಾಂಕ ಇರುವ ಮೊಹರು (ಸೀಲ್) ಹಾಕಿ ನೀಡಲಾಗುತ್ತದೆ . ರಾಜ್ಯ ವಿಧಾನಸಭಾ ಚುನಾವಣೆಯ ಪ್ರಯುಕ್ತ , ಮತದಾನ ಮಹತ್ವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ, ಎಲ್ಲಾ ಇಲಾಖೆಗಳು ಸಾರ್ವಜನಿಕರಿಗೆ ನೀಡುವ ಸ್ವೀಕೃತಿ ಹಿಂಬರಹಗಳಿಗೆ, ತಮ್ಮ ಇಲಾಖೆಯ ಸೀಲ್ ಜೊತೆಗೆ , “ಮತ ಚಲಾಯಿಸಿ, ಪ್ರಜಾಪ್ರಭುತ್ವ ಬೆಳೆಸಿ” ಎನ್ನುವ ಸೀಲ್ ನ್ನು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್, ನಿಗಮ ,ಮಂಡಳಿಗಳು ಸೇರಿದಂತೆ ಸುಮಾರು 400 ಸೀಲ್ ಹಾಕುವ ಮುದ್ರೆಗಳನ್ನು ಸ್ವೀಪ್ ಸಮಿತಿ ವತಿಯಿಂದ ಸರಬರಾಜು ಮಾಡಲಾಗಿದೆ.

    ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು , ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಆಗಮಿಸುವ ರೋಗಿಗಳಿಗೆ ನೀಡುವ ಆರೋಗ್ಯ ಚೀಟಿಯಲ್ಲಿಯೂ ಸಹ ಈ ಮುದ್ರೆಯನ್ನು ಕಡ್ಡಾಯವಾಗಿ ಬಳಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಸೂಚಿಸಿದ್ದಾರೆ.

    ಅಲ್ಲದೇ ಜಿಲ್ಲೆಯಲ್ಲಿ ಮತದಾನ ಮಹತ್ವ ಕುರಿತಂತೆ ಅರಿವು ಮೂಡಿಸಿ , ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ , ಮಲ್ಪೆ ಕಡಲ ತೀರದಲ್ಲಿ ಪ್ಯಾರಾಚೂಟ್ ನಲ್ಲಿ ಮತದಾನ ಜಾಗೃತಿ ಕುರಿತು ಸಂದೇಶ ಮೂಡಿಸಲಾಗುತ್ತಿದ್ದು, ಕಳೆದ ಬಾರಿ ಕಡಿಮೆ ಮತದಾನ ನಡೆದಿರುವ ಪ್ರದೇಶಗಳಲ್ಲಿ ಯಕ್ಷಗಾನದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾಪಶಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply