KARNATAKA
ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ವಿಸ್ತಾರ ನ್ಯೂಸ್ ಸಂಪಾದಕ ಹರಿಪ್ರಕಾಶ್ ಕೋಣೆಮನೆ
ಬೆಂಗಳೂರು ಜನವರಿ 05 : ರಾಜ್ಯ ಬಿಜೆಪಿ 11 ಮಂದಿ ನೂತನ ವಕ್ತಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹಿರಿಯ ಪತ್ರಕರ್ತ, ವಿಸ್ತಾರ ನ್ಯೂಸ್ ನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಸೇರಿದ್ದಾರೆ. ಇದರೊಂದಿಗೆ ಹರಿಪ್ರಕಾಶ್ ಕೋಣೆಮನೆ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಶ್ವಥ್ ನಾರಾಯಣ ಮುಖ್ಯ ವಕ್ತಾರರಾಗಿದ್ದು, ಛಲವಾದಿ ನಾರಾಯಣಸ್ವಾಮಿ, ಡಾ. ತೇಜಸ್ವಿನಿ ಗೌಡ, ಕೆಎಸ್ ನವೀನ್, ಎಂಜಿ ಮಹೇಶ್, ಹೆಚ್ ಎನ್ ಚಂದ್ರಶೇಖರ್, ನರೇಂದ್ರ ರಂಗಪ್ಪ, ಸುರಭಿ ಹೊದಿಗೆರೆ, ಅಶೋಕ್ ಕೆಎಂ ಗೌಡ, ಹೆಚ್ ವೆಂಕಟೇಶ್ ದೊಡ್ಡೇರಿ ಸೇರಿದಂತೆ 11 ಮಂದಿ ವಕ್ತಾರರಾಗಿ ನಿಯುಕ್ತಿಗೊಂಡಿದ್ದಾರೆ.
ಇದೇ ವೇಳೆ ಹಲವು ವಿಭಾಗಗಳಿಗೆ ಸಂಚಾಲಕ-ಸಹ ಸಂಚಾಲಕರನ್ನು ಬಿಜೆಪಿ ನೇಮಕ ಮಾಡಿದೆ. ಸಾಮಾಜಿಕ ಜಾಲತಾಣ ವಿಭಾಗಕ್ಕೆ ಸಂಚಾಲಕರಾಗಿ ಪ್ರಶಾಂತ್ ಮಾಕನೂರು, ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ, ಐಟಿ ವಿಭಾಗದ ಸಂಚಾಲಕರಾಗಿ ನಿತಿನ್ ರಾಜ್ ನಾಯಕ್, ಶ್ಯಾಮಲಾ ರಘುನಂದನ್ ಸಹ ಸಂಚಾಲಕರಾಗಿ ನೇಮಕಗೊಂಡಿದ್ದರೆ, ಮಾಧ್ಯಮ ವಿಭಾಗಕ್ಕೆ ಕರುಣಾಕರ ಖಾಸಲೆ ಸಂಚಾಲರಾಗಿ, ಪ್ರಶಾಂತ್ ಕೆಡಂಜಿ ಸಹ ಸಂಚಾಲಕರಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ
You must be logged in to post a comment Login