LATEST NEWS
ಉಡುಪಿ ನೂತನ ಜಿಲ್ಲಾಧಿಕಾರಿ ಎಂ.ಕೂರ್ಮ ರಾವ್ ಅಧಿಕಾರ ಸ್ವೀಕಾರ
ಉಡುಪಿ ಸೆಪ್ಟೆಂಬರ್ 1: ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ಎಂ ಕೂರ್ಮರಾವ್ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಬಳಿಕ ಡಿಡಿಪಿಐ ಜತೆ ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಮೊದಲ ದಿನ ಶಾಲೆಗೆ ತೆರಳಿ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದ ಡಿ.ಸಿ, ಮಕ್ಕಳ ಅನುಭವ, ಪಾಠಗಳ ಬಗ್ಗೆ ಸಂವಾದ ನಡೆಸಿದರು.
ನಾನು ಜಿಲ್ಲೆಯ ಹೊಸ ಡಿಸಿ ಎಂ.ಕೂರ್ಮ ರಾವ್. ಕೋವಿಡ್ ನಿರ್ಮೂಲನೆಗೆ ಪಾಲಕರು, ವಿದ್ಯಾರ್ಥಿಗಳು ನಮ್ಮೊಂ ದಿಗೆ ಕೈಜೋಡಿಸಬೇಕು ಎಂದು ಸ್ವಯಂ ಪರಿಚಯ ಮಾಡಿಕೊಂಡು ಮಾತನಾಡಿದರು ಡಿಸಿ. ಬಳಿಕ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದ ಡಿ.ಸಿ, ಮಕ್ಕಳ ಅನುಭವ, ಪಾಠಗಳ ಬಗ್ಗೆ ಸಂವಾದ ನಡೆಸಿದರು. ಕರೊನಾ ನಿರ್ಮೂಲನೆಗೆ ನಿಮ್ಮ ಸಹಕಾರ ಅಗತ್ಯ ಎಂದು ಕಿವಿಮಾತು ಹೇಳಿದರು. ಈ ವೇಳೆ ಕೆಲ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮುಂದೆ ಜಿಲ್ಲೆಯಲ್ಲಿ ಇದೇ ರೀತಿ ಪ್ರವಾಸ ಮಾಡಿ ಜಿಲ್ಲೆಯ ನಾಡಿಮಿಡಿತ ಅರಿತುಕೊಳ್ಳುವುದಾಗಿ ಜಿಲ್ಲಾಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
You must be logged in to post a comment Login