Connect with us

    BANTWAL

    ಆಟೋರಿಕ್ಷಾದಲ್ಲಿದ್ದ ದಂಪತಿ ಮೇಲೆ ಹಲ್ಲೆ – ಇಬ್ಬರು ಪೊಲೀಸ್ ವಶಕ್ಕೆ

    ಬಂಟ್ವಾಳ ಜೂನ್ 28 : ಆಟೋ ರಿಕ್ಷಾದಲ್ಲಿದ್ದ ದಂಪತಿಯ ಮೇಲೆ ಹಲ್ಲೆ ಮಾಡಿ ಜೀವ ಬೇದರಿಕೆ ಹಾಕಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುದರ್ಶನ್ ಮತ್ತು ಧನರಾಜ್ ಎಂದು ಗುರುತಿಸಲಾಗಿದೆ.


    ದೂರುದಾರ ಜಯಂತ ಅವರ ದೂರಿನ ಪ್ರಕಾರ ಆಟೋ ರಿಕ್ಷಾದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿಗೆ ತಲುಪುತಿದ್ದಂತೆ ಸಾಲೆತ್ತೂರಿನ ವೈನ್ ಶಾಪ್ ಕಡೆಯಿಂದ ಎರಡು ಮೋಟಾರ್ ಸೈಕಲ್ ಗಳಲ್ಲಿ ಮುನ್ನ ಯಾನೆ ಸುದರ್ಶನ್,ಶರತ್,ಧನು ಮತ್ತು ಉದಯ ರವರು ಬಂದು ನಮ್ಮ ಆಟೋ ರಿಕ್ಷಾವನ್ಮು‌ತಡೆದು‌ ನಿಲ್ಲಿಸಿ ನನ್ನ ಪತ್ನಿಯ ಮೈ ಮೇಲೆ ಕೈ ಹಾಕಿ ದೂಡಿದಾಗ ನಾನು ಅದನ್ನು ತಡೆಯಲು‌ ಹೋದಾಗ ನನ್ನ ಮೇಲೆ ತಂಡ ಹಲ್ಲೆ ನಡೆಸಿದೆ. ನನ್ನ ಪತ್ನಿ‌ ಹಾಗೂ ಸ್ನೇಹಿತ‌ ಹಲ್ಲೆನಡೆಸುವುದನ್ನು ತಡೆದಾಗ ತಂಡ ನನಗೆ ಜೀವ‌ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿಸಲಾಗಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮುನ್ನ ಯಾನೆ ಸುದರ್ಶನ, ಶರತ್‌, ಧನರಾಜ್, ಉದಯ ಆರೋಪಿಗಳಾಗಿದ್ದು, ಈ ಪೈಕಿ ಸುದರ್ಶನ್ ಮತ್ತು ಧನರಾಜ್ ನನ್ನು ಬಂಧಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply