LATEST NEWS
ತಿರುಪ್ಪುರ – ಭೀಕರ ರಸ್ತೆ ಅಪಘಾತಕ್ಕೆ 3 ತಿಂಗಳ ಮಗು ಸೇರಿದಂತೆ 5 ಜನ ಬಲಿ
ಚೆನ್ನೈ ಎಪ್ರಿಲ್ 09: ಸರಕಾರಿ ಬಸ್ ಹಾಗೂ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 3 ತಿಂಗಳ ಮಗು ಸೇರಿದಂತೆ 5 ಜನ ಸಾವನಪ್ಪಿದ ಘಟನೆ ತಿರುಪ್ಪೂರಿ ಬಳಿ ನಡೆದಿದೆ. ಅಪಘಾತ0ದ ರಭಸಕ್ಕೆ ಹೊಂಡಾ ಸಿಟಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ದಂಪತಿಗಳು ತಮ್ಮ 60 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ತಿರುಪ್ಪೂರ್ನ ಕುಟುಂಬವು ತಿರುಕ್ಕಡೈಯೂರ್ನಿಂದ ಹೊರಟು ಸೋಮವಾರ ತಡರಾತ್ರಿ ತಿರುಪ್ಪೂರ್ಗೆ ಮರಳುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ಮುಂಜಾನೆ ವೆಲ್ಲಕೋವಿಲ್ ದಾಟಿ ತಿರುಪುರ್ ಕಡೆಗೆ ಬರುತ್ತಿದ್ದಾಗ ಓಲಪಾಳ್ಯಂ ಎಂಬಲ್ಲಿ ತಿರುಚ್ಚಿ ಕಡೆಗೆ ಹೋಗುತ್ತಿದ್ದ ತಮಿಳುನಾಡು ಸರ್ಕಾರಿ ಬಸ್ (TNSTC) ಕಾರಿಗೆ ಡಿಕ್ಕಿ ಹೊಡೆದಿದೆ.
ಮೃತರನ್ನು ದಂಪತಿ ಚಂದ್ರಶೇಖರ್ ಮತ್ತು ಚಿತ್ರಾ, ಅವರ ಎರಡನೇ ಮಗ ಎಳವರಸನ್, ಸೊಸೆ ಅರಿವಿತ್ರ ಮತ್ತು ಆಕೆಯ ಮೂರು ತಿಂಗಳ ಮಗು ಸಾಕ್ಸಿ ಎಂದು ಗುರುತಿಸಲಾಗಿದೆ . ಅಪಘಾತದಲ್ಲಿ ದಂಪತಿಯ ಹಿರಿಯ ಪುತ್ರ ಶಶಿಧರನ್ (35) ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪ್ಪೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದ್ದು, ವೆಲ್ಲಕೋಯಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ. ಅಪಘಾತದಿಂದಾಗಿ ಕೊಯಮತ್ತೂರು-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
You must be logged in to post a comment Login