Connect with us

    LATEST NEWS

    ವಿಲನ್ ಚಿತ್ರದ ವಿಲನ್ ಅಭಿಮಾನಿಗಳ ಕುಕೃತ್ಯ, ಗೋವಿನ ಬಲಿ ಪಡೆದ ಮೆರೆದರು ವಿಕೃತಿ

    ವಿಲನ್ ಚಿತ್ರದ ವಿಲನ್ ಅಭಿಮಾನಿಗಳ ಕುಕೃತ್ಯ, ಗೋವಿನ ಬಲಿ ಪಡೆದ ಮೆರೆದರು ವಿಕೃತಿ

    ಮಂಗಳೂರು ಅಕ್ಟೋಬರ್ 20: ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟಿಸಿರುವ ವಿಲನ್ ಚಿತ್ರದ ಯಶಸ್ವಿಗಾಗಿ ಗೋವನ್ನು ಸಾರ್ವಜನಿಕವಾಗಿ ಅಮಾನುಷವಾಗಿ ಬಲಿ ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ವಿಡಿಯೋದಲ್ಲಿ ಜನಸಂದಣಿಯ ಇರುವ ಸ್ಥಳದಲ್ಲಿ ಗೋವೊಂದನ್ನು ಅಮಾನುಷವಾಗಿ ಕಡಿದು ಅದರ ರುಂಡ ಹಾಗೂ ಮುಂಡದಲ್ಲಿ ಹರಿಯುವ ರಕ್ತವನ್ನು ವಿಲನ್ ಚಿತ್ರದ ಕಟೌಟ್ ಗೆ ಸಿಂಪಡಿಸುತ್ತಿರುವುದು ಸೆರೆಯಾಗಿದೆ.

    ಶಿವರಾಜ್ ಕುಮಾರ್ ಹಾಗೂ ಸುದೀಪ್ ರ ಇಂಥ ಅನಾಗರಿಕ ಅಭಿಮಾನಿಗಳ ವರ್ತನೆ ಇದೀಗ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ಅದರಲ್ಲೂ ಕರಾವಳಿ ಜಿಲ್ಲೆಯ ಹಿಂದೂ ಸಂಘಟನೆಗಳು ಈ ಅನಾಗರಿಕ ಹಾಗೂ ಅವಿವೇಕಿ ಅಭಿಮಾನಿಗಳ ಕೃತ್ಯವನ್ನು ಖಂಡಿಸಿದೆ.

    ವಿಲನ್ ಚಿತ್ರವನ್ನು ಬ್ಯಾನ್ ಮಾಡಬೇಕೆಂಬ ಒತ್ತಡವೂ ಇದೀಗ ಸಾಮಾಜಿಕ ಜಾಲತಾಣಿಗರಿಂದ ಕೇಳಿ ಬರಲಾರಂಭಿಸಿದೆ. ಇಂಥಹ ಹುಚ್ಚುತನದ ಅಭಿಮಾನಿಗಳನ್ನು ಹೊಂದಿರುವ ಈ ನಾಯಕ ನಟರ ವಿರುದ್ಧವೂ ಆಕ್ರೋಶ ಕೇಳಿ ಬರಲಾರಂಭಿದೆ.

    ಘಟನೆ ಎಲ್ಲಿ ನಡೆದಿರೋದು ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ. ಇದ್ದ ಬದ್ದ ಸಂಪ್ರದಾಯಗಳಿಗೆ ಪ್ರಾಣಿ ಹಿಂಸೆಯ ಸಬೂಬು ಹೇಳುವ ಪ್ರಾಣಿದಯಾ ಸಂಘ ಈ ಕೃತ್ಯದ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಎನ್ನುವ ಕಾತರದಲ್ಲೂ ಜಾಲತಾಣಿಗರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply