Connect with us

    DAKSHINA KANNADA

    ಶಹಬ್ಬಾಸ್ ಮೂರ್ತಿ- ಕಡಬಲ್ಲಿ ವಿದ್ಯುತ್ ತಂತಿಯಲ್ಲಿ ಸಿಲುಕಿದ್ದ ಪಾರಿವಾಳಕ್ಕೆ ಜೀವದಾನ ಮಾಡಿದ ಪವರ್ ಮ್ಯಾನ್..!

    ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಪಾರಿವಾಳವನ್ನು ಮೆಸ್ಕಾಂ ಪವರ್ ಮ್ಯಾನ್ ಒಬ್ಬರು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೇಟೆಯಲ್ಲಿ ನಡೆದಿದೆ.

    ಕಡಬ : ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಪಾರಿವಾಳವನ್ನು ಮೆಸ್ಕಾಂ ಪವರ್ ಮ್ಯಾನ್ ಒಬ್ಬರು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೇಟೆಯಲ್ಲಿ ನಡೆದಿದೆ.

    ಕಡಬ ಮೆಸ್ಕಾಂ ಇಲಾಖೆಯ ಪವರ್ ಮ್ಯಾನ್ ಮೂರ್ತಿ ಪಾರಿವಾಳದ ಜೀವ ಉಳಿಸಿದವರಾಗಿದ್ದಾರೆ.

    ಕಡಬ ಮುಖ್ಯ ಪೇಟೆಯಲ್ಲಿ ತಂತಿಯಲ್ಲಿ ಪಾರಿವಾಳ ಸಿಲುಕಿಕೊಂಡು ಒದ್ದಾಡುತ್ತಿರುವುದನ್ನು ವರ್ತಕರು ಗಮನಿಸಿ ಕೂಡಲೇ  ಪವರ್ ಮೆನ್ ಗಮನಕ್ಕೆ ತಂದಿದ್ದರು.

    ಕೂಡಲೇ ಸ್ಪಂದಿಸಿದ ಮೂರ್ತಿ ವಿದ್ಯುತ್ ಪ್ರಸಾರವನ್ನು ಸ್ಥಗಿತಗೊಳಿಸಿ  ಕಂಬವನ್ನೇರಿ ಪಾರಿವಾಳವನ್ನು ರಕ್ಷಿಸಿದ್ದಾರೆ.  ಮೂರ್ತಿಯ ಮಾನವೀಯತೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply