Connect with us

    DAKSHINA KANNADA

    ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಮುಂದಾದ ಸರ್ಕಾರ..!

    ಬೆಂಗಳೂರು, ಅಕ್ಟೋಬರ್ 28: ಬಯಲು ಸೀಮೆ ಮಂದಿಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ಕಾಮಗಾರಿ ಆರಂಭವಾಗಿ ಶುರುವಾಗಿ 10 ವರ್ಷ ಕಳೆದಿದೆ. ಆದರೆ ಇದು ಪೂರ್ಣಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಆದರೆ ಈ ಯೋಜನೆ ಪೂರ್ಣಗೊಳಿಸಲು ಮತ್ತಷ್ಟು ಹಣ ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿದೆ.

    ಕುಂಟುತ್ತಾ ನಡೆಯುತ್ತಿರುವ ಈ ಯೋಜನೆಯ ಶೇ.50ರಷ್ಟು ಕಾಮಗಾರಿ ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ಯೋಜನೆಯ ಮೂಲ ವೆಚ್ಚ 8ಸಾವಿರ ಕೋಟಿ ರೂ. ಆಗಿತ್ತು. ನಂತರ ಇದನ್ನು 13ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. ಆದರೆ ಈ ಮೊತ್ತವೂ ಈಗ ಸಾಕಾಗುತ್ತಿಲ್ಲವಂತೆ. ಹೀಗಾಗಿ ಈ ಯೋಜನೆಗೆ ಮತ್ತೆ ಅನುದಾನ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.

    ಈಗ ಎತ್ತಿನ ಹೊಳೆ ಯೋಜನೆಗೆ ಹೊಸ ಹಣಕಾಸು ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಯೋಜನೆ ಮುಗಿಸಲು 23,251 ಕೋಟಿ ರೂ. ಬೇಕಾಗುತ್ತದೆ. ಅನುಮತಿ ನೀಡಿ ಎಂದು ಆರ್ಥಿಕ ಇಲಾಖೆಗೆ ಕಡತ ರವಾನಿಸಿದೆ. ಮೂಲಗಳ ಪ್ರಕಾರ ಈ ಮೊತ್ತ ಕೂಡ ಸಾಕಾಗುವುದು ಅನುಮಾನ. ಇದನ್ನು 25 ಸಾವಿರ ಕೋಟಿಗೆ ಹಿಗ್ಗಿಸುವ ಪ್ರಯತ್ನಗಳು ಕೂಡ ನಡೆಯುತ್ತಿದೆ.

    ಸರ್ಕಾರದ ಹೊಸ ಲೆಕ್ಕದ ಪ್ರಕಾರ 1 ಟಿಎಂಸಿ ನೀರನ್ನು ಪಶ್ಚಿಮಘಟ್ಟಗಳಿಂದ ಬಯಲು ಸೀಮೆಗೆ ತರಲು 1 ಸಾವಿರ ಕೋಟಿ ಹಣ ಖರ್ಚಾಗುತ್ತಿದೆ. ಇಂತಹ ದುಬಾರಿ ಯೋಜನೆ ಜನರಿಗೆ ಬೇಕಾ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply