BANTWAL
ಅಪ್ರಾಪ್ತನನ್ನು ಥಳಿಸಿದ ‘ಚಾರ್ಲಿ’ಗೆ ಜೈಲು ತೋರಿಸಿದ ನ್ಯಾಯಾಲಯ..!
ಪುತ್ತೂರು: ಅಪ್ರಾಪ್ತ ಬಾಲಕನನ್ನು ಥಳಿಸಿದ ಆರೋಪದಲ್ಲಿ ಆರೋಪಿಗೆ ದಂಡದೊಂದಿಗೆ ಜೈಲು ತೋರಿಸಿ ಪುತ್ತೂರು ನ್ಯಾಯಾಲಯ ತೀರ್ಪು ನೀಡಿದೆ.
2018ರಲ್ಲಿ ಬಂಟ್ವಾಳ ತಾಲೂಕಿನ ಪೆರ್ನೆ ಬಲತೋಟ ಆಮ್ಕೆ ಎಂಬಲ್ಲಿ ಚಾರ್ಲಿ ಮೇನೇಜಸ್ ಎಂಬವರು ಅಪ್ರಾಪ್ತ ಬಾಲಕನನ್ನು ಥಳಿಸಿ ಗಾಯಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಾರ್ಲಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ಮತ್ತು 3 ಸಾವಿರ ರೂಪಾಯಿ ದಂಡ ವಿಧಿಸಿ ಪುತ್ತೂರು ನ್ಯಾಯಾಲಯ ಆದೇಶಿಸಿದೆ. ಪುತ್ತೂರು ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಚ್ ಆರ್ ಶಿವಣ್ಣ ಮಾ.21ರಂದು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಎಪಿಪಿ ಕವಿತಾ ವಾದ ಮಂಡಿಸಿದ್ದರು.
You must be logged in to post a comment Login