Connect with us

    LATEST NEWS

    ಪಕ್ಷಕ್ಕೆ ಮುಜುಗರದ ಹೇಳಿಕೆ : ಪ್ರತಿಭಾ ಕುಳಾಯಿಗೆ ಶಿಸ್ತು ಕ್ರಮದ ನೋಟಿಸ್ ನೀಡಿದ ಜಿಲ್ಲಾ ಕಾಂಗ್ರೆಸ್

    ಪಕ್ಷಕ್ಕೆ ಮುಜುಗರದ ಹೇಳಿಕೆ : ಪ್ರತಿಭಾ ಕುಳಾಯಿಗೆ ಶಿಸ್ತು ಕ್ರಮದ ನೋಟಿಸ್ ನೀಡಿದ ಜಿಲ್ಲಾ ಕಾಂಗ್ರೆಸ್

    ಮಂಗಳೂರು, ಮಾರ್ಚ್ 14 : ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯೆಯಾದ ಪ್ರತಿಭಾ ಕುಳಾಯಿಗೆ ಜಿಲ್ಲಾ ಕಾಂಗ್ರೆಸ್ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹರೀಶ್ ಕುಮಾರ್ ಅವರು ಪ್ರತಿಭಾ ಕುಳಾಯಿ ಅವರಿಗೆ ಈ ನೋಟಿಸ್ ಜಾರಿ ಮಾಡಿದ್ದು,

    ಯಾವು ಪಾಲಿಕೆ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದೀರಿ.

    ಆದರೆ ಪಕ್ಷದ ಜಿಲ್ಲೆಯ ಅಥವಾ ರಾಜ್ಯದ ನಾಯಕರ ಅನುಮತಿ ಇಲ್ಲದೆ ರಾಷ್ಟ್ರೀಯ , ಹಾಗೂ ರಾಜ್ಯದ ಟಿ ವಿ ಮಾದ್ಯಮಗಳ ಸ್ಟುಡಿಯೋ ಗಳಲ್ಲಿ ಕೂತು ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದೀರಿ.

    ಆದ್ದರಿಂದ ತಮ್ಮ ಮೇಲೆ ಪಕ್ಷ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ.

    ಪ್ರತಿಭಾ ಕುಳಾಯಿ ಅವರಿಗೆ ಉತ್ತರಿಸಲು ಏಳು ದಿನಗಳ ಕಾಲವಕಾಶ ನೀಡಲಾಗಿದೆ.
    ತನ್ನೊಂದಿಗೆ ಅನುಚಿತ ವರ್ತನೆ ತೋರಿದ್ದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಬ್ದುಲ್ ಸತ್ತರ್ ಅವರಿಗೆ ಪ್ರತಿಭಾ ಕುಳಾಯಿ ಇತ್ತಿಚೆಗೆ ಮಂಗಳೂರು ಉತ್ತರ ಶಾಸಕ ಮೊಯಿದಿನ್ ಬಾವಾ ಅವರ ಕಚೇರಿಯಲ್ಲಿ ಧರ್ಮಧೇಟು ನೀಡಿ ಸುದ್ದಿಯಾಗಿದ್ದರು.

    ಅನುಚಿತ ವರ್ತನೆಯ ಹಿನ್ನೆಲೆಯಲ್ಲಿ ಅಬ್ದುಲ್ ಸತ್ತರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿತ್ತು.

    ಈ ವಿದ್ಯಮಾನಗಳನ್ನು ಪ್ರತಿಭಾ ಕುಳಾಯಿ ಅವರು ಪಕ್ಷದ ಅನುಮತಿ ಪಡೆಯದೆ ಮಾದ್ಯಮಗಳಲ್ಲಿ ಚರ್ಚಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply