Connect with us

KARNATAKA

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ

ಹುಬ್ಬಳ್ಳಿ, ಜುಲೈ 05: ನಗರದ ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿʻ ಸರಳ ವಾಸ್ತು ʼ ಎಂದೇ ಪ್ರಸಿದ್ಧಿ ಪಡೆದ ಸರಳ ವಾಸ್ತು ಗುರುಜೀ ಚಂದ್ರಶೇಖರ್‌ ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ.

ಕಾರ್ಯನಿಮಿತ್ತ ಹುಬ್ಬಳ್ಳಿಗೆ ಬಂದಿದ್ದ ಗುರೂಜಿನ್ನು 12.23ರ ಸುಮಾರಿಗೆ ಹೋಟೇಲ್‌ ರಿಸೆಪ್ಷನ್‌ನಲ್ಲಿ ವಾಸ್ತು ಕೇಳುವ ನೆಪದಲ್ಲಿ ಭೇಟಿ ಮಾಡಿದ್ದಾರೆ. ರಿಸೆಪ್ಷನ್‌ನಲ್ಲಿ 30 ನಿಮಿಷ ಕಾದಿದ್ದ ದುಷ್ಕರ್ಮಿಗಳು ಅವರು ಬರುತ್ತಿದ್ದಂತೆ ಓರ್ವ ಗುರೂಜಿಯ ಕಾಲಿಗೆ ಬೀಳುತ್ತಿದ್ದಂತೆ ಮತ್ತೋರ್ವ ಚಾಕುವಿನಿಂದ ಇರಿದಿದ್ದಾನೆ. ತದನಂತರ ಇಬ್ಬರೂ ಚುಚ್ಚಿ ಕೊಲೆಗೈದು ಹೋಟೇಲ್‌ನಿಂದ ಓಡಿಹೋಗಿ ಪರಾರಿಯಾಗಿದ್ದಾರೆ.

ಸದ್ಯ ಹುಬ್ಬಳ್ಳಿಯಾದ್ಯಂತ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಹುಬ್ಬಳ್ಳಿ ನಗರದಾದ್ಯಂತ ನಾಕಾಬಂಧಿ ಬಳಸಿ ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ. ನಗರದಿಂದ ಹೊರಗೋಗುವ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ. ಮನೆ, ಅಂಗಡಿ, ಕಟ್ಟಡದ ಬಗ್ಗೆ ವಾಸ್ತು ಹೇಳುತ್ತಿದ್ದ ಚಂದ್ರಶೇಖರ ಗುರೂಜಿ ಸರಳ ವಾಸ್ತು ಗುರೂಜಿ ಎಂದೇ ಪ್ರಸಿದ್ದೀ ಪಡೆದಿದ್ದರು. ಸದ್ಯ ಗುರೂಜಿಯಿಂದ ಮೋಸ ಹೋದವರೇ ಈ ಕೃತ್ಯ ನಡೆಸಿರಬುದೆಂಬ ಶಂಕೆ ವ್ಯಕ್ತವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *