Connect with us

    LATEST NEWS

    ಸುಳ್ಯ : ಮೀನು ಹಿಡಿಯಲು ಹೋದ ನಾಲ್ವರಲ್ಲಿ ಓರ್ವ ನೀರುಪಾಲು..!

    ಸುಳ್ಯ: ಮೀನು ಹಿಡಿಯಲು ನದಿಗಿಳಿದ ನಾಲ್ವರಲ್ಲಿ ಓರ್ವ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ  ದಕ್ಷಿಣ ಕನ್ನಡದ ಸುಳ್ಯ ಮಂಡೆಕೋಲು ಗ್ರಾಮದಲ್ಲಿ ನಡೆದಿದೆ.

    ಮಂಡೆಕೋಲು ಗ್ರಾಮ ಮುರೂರು ಸಮೀಪ ಪರಪ್ಪೆ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ಈಶ್ವರ ಮಂಗಲದ ನಾಲ್ಕು ಜನ ಪರಪ್ಪೆ ನದಿಗೆ ಮೀನು ಹಿಡಿಯಲು ಬಂದಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ನಾಲ್ವರಲ್ಲಿ ಒಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಮೃತಪಟ್ಟ ವ್ಯಕ್ತಿಯನ್ನು ಈಶ್ವರಮಂಗಲ ಪ್ರವೀಣ್ ಎಂದು ಗುರುತಿಸಲಾಗಿದೆ.
    ಮೃತದೇಹವನ್ನು ಪೈಚಾರ್ ಮುಳುಗು ತಜ್ಞರ ತಂಡದವರು ನದಿಯಿಂದ ಮೇಲೆತ್ತಿದ್ದಾರೆ. ಸುಳ್ಯ ಅಸ್ಪತ್ರೆಯ ಶವಗಾರದಲ್ಲಿ ಮೃತಹೇಹವನ್ನು ಇರಿಸಲಾಗಿದೆ. ಸುಳ್ಯ ಪೋಲಿಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲು ಮಾಡಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply