Connect with us

KARNATAKA

ಸುಳ್ಯದಿಂದ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಾಹಿದ್ ಕೊನೆಗೂ ಬೆಂಗಳೂರಿನಲ್ಲಿ ಪತ್ತೆ, ಎಲ್ಲಾ ಊಹಾಪೋಹಗಳಿಗೆ ತೆರೆ..!

ಸುಳ್ಯ :  ದಕ್ಷಿಣ ಕನ್ನಡ ಜಿಲ್ಲೆಯ  ಸುಳ್ಯದ ಅರಂಬೂರು ಸಂಬಂಧಿಕರ ಮನೆಗೆ ಬಂದು ಹಿಂದಿರುಗದೆ  ಕಳೆದ ಹತ್ತು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಕೊನೆಗೂ ಪತ್ತೆಯಾಗುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಮಾಡನ್ನೂರಿನ ಹಮೀದ್ ನೆಕ್ಕರೆ ಅವರ ಮಗ ಶಾಹಿದ್ ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ. ಆದ್ರೆ ಇಂದು ಬೆಂಗಳೂರಿನಲ್ಲಿ ಪತ್ತೆಯಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.  ಸುಳ್ಯದ ಅರಂಬೂರು ಸಂಬಂಧಿಕರ ಮನೆಗೆ ಬಂದು ಹಿಂದಿರುಗದೆ ಕಳೆದ ಹತ್ತು ದಿನಗಳಿಂದ  ಶಾಹಿದ್  ನಾಪತ್ತೆಯಾಗಿದ್ದ ಈ ಬಗ್ಗೆ ಅನೇಕ ಊಹಾಪೋಹಗಳು ಎದ್ದಿದ್ದುವು  ಈ ಬಗ್ಗೆ ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಿ  ಬಾಲಕನ ಹುಡುಕಾಟಕ್ಕಾಗಿ ಕಾರ್ಯಚರಣೆ ನಡೆಸುತ್ತಿದ್ದರು. ಈ ಮಧ್ಯೆ ಬಾಲಕ ಬೆಂಗಳೂರಿನಲ್ಲಿ ಪತ್ತೆಯಾಗಿರುವುದಾಗಿ  ಕುಟುಂಬದ ಮೂಲ ಸ್ಪಷ್ಟಪಡಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *