DAKSHINA KANNADA
ಸುಳ್ಯ: ಹೊಳೆಗೆ ಬಿದ್ದ ಸರ್ಕಾರಿ ಬಸ್ , ಹಲವರಿಗೆ ಗಾಯ
ಸುಳ್ಯ, ಮಾರ್ಚ್ 17: ಸುಳ್ಯ-ಮಡಿಕೇರಿ ಗಡಿಭಾಗ ಸಂಪಾಜೆಯ ಬಳಿ ಸರ್ಕಾರಿ ಬಸ್ಸೊಂದು ರಸ್ತೆಯಿಂದ ಕೆಳಗೆ ಹೊಳೆಗೆ ಬಿದ್ದು, ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ಗಾಯಾಳುಗಳನ್ನು ಸಂಪಾಜೆ ಮತ್ತು ಸುಳ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಧರ್ಮಸ್ಥಳದಿಂದ ಗುಂಡ್ಲುಪೇಟೆ ಹೊರಟಿದ್ದ ಈ ಬಸ್ ಸಂಪಾಜೆ ಸಮೀಪದ ಗಡಿಕಲ್ಲು ಎಂಬಲ್ಲಿ ರಸ್ತೆಯಿಂದ ಸುಮಾರು 50 ಅಡಿ ಆಳದಲ್ಲಿರುವ ಹೊಳೆಗೆ ಇಳಿದಿದೆ.
ಬಸ್ ನ ಟಯರ್ ಬ್ಲಾಸ್ಟ್ ಆದ ಪರಿಣಾಮ ಈ ಘಟನೆ ನಡೆದಿದ್ದು, ಘಟನೆಯಿಂದಾಗಿ ಬಸ್ ನಲ್ಲಿದ್ದ ಸುಮಾರು 25 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಇದರಲ್ಲಿ ಓರ್ವರಿಗೆ ಗಂಭೀರ ಗಾಯವಾದ ಬಗ್ಗೆ ವರದಿಯಾಗಿದೆ.
ಬಸ್ ಹೊಳೆಯಲ್ಲಿ ಪಲ್ಟಿಯಾಗದೆ, ನೇರವಾಗಿ ಬಿದ್ದ ಪರಿಣಾಮ ಹಾಗು ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದ ಕಾರಣ ನಡೆಯಲಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
You must be logged in to post a comment Login