Connect with us

BELTHANGADI

ಧರ್ಮಸ್ಥಳ ಸಹಕಾರಿ‌ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆತ್ಮಹತ್ಯೆ : ಪ್ರಕರಣಕ್ಕೆ ಹೊಸ ತಿರುವು…!

ಧರ್ಮಸ್ಥಳ, ಮೇ 04 : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆ ಪ್ರಕರಣಕ್ಕೆ ಹೊಸ ತಿರುವು ಬಂದಿದೆ.

ಬೆಳ್ತಂಗಡಿಯ ಅಟಲ್ ಜೀ ಸಭಾಭವನದಲ್ಲಿ ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ (60) ಅವರು ಆತ್ಮಹತ್ಯೆ ಮಾಡಿಕೊಂಡವರು. ರವೀಂದ್ರನ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.ಇವರು ನಿನ್ನೆ ಬೆಳಗ್ಗೆ 7:30ರ ವೇಳೆ ಕಚೇರಿಗೆ ಬಂದು ಸ್ವಲ್ಪ ಕೆಲಸ ಮಾಡಿದ್ದರು.

ಮಧ್ಯಾಹ್ನ ಸಂಘದ ಅಟಲ್ ಜೀ ಸಭಾಭವನದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಮೃತರು ಈ ತಿಂಗಳ‌ ಕೊನೆಗೆ‌ ನಿವೃತ್ತಿಯಾಗುವವರಿದ್ದು, ಆತ್ಮಹತ್ಯೆಗೆ ಸಹೋದ್ಯೋಗಿಗಳ ಕಿರುಕುಳ ಕಾರಣ ಎಂಬುದಾಗಿ ಮನೆಯವರ ಆರೋಪಿಸಿದ್ದಾರೆ.ರವೀಂದ್ರನ್ ಅವರ ಮೊಬೈಲ್ ಫೋನಿನಲ್ಲಿ ಲೆಟರ್ ಪತ್ತೆಯಾಗಿದೆ.ಇದರಲ್ಲಿ ಇಬ್ಬರ ಹೆಸರು ಉಲ್ಲೇಖವಾಗಿದೆ.

ಒತ್ತಡ ಹೇರಿದ ಜಯರಾಮ ಭಂಡಾರಿ ಮತ್ತು ರಘುಚಂದ್ರ ಇವರನ್ನು ಕ್ಷಮಿಸಲ್ಲ ಎಂಬುದಾಗಿ ಪತ್ರದಲ್ಲಿ ಬರೆದಿದ್ದಾರೆ.
ಅಂತ್ಯಕಾಲದಲ್ಲಿ ಈ ಮುಟ್ಠಾಲರಿಂದ ಅವಮಾನಿತನಾಗಲು ಇಚ್ಚೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ರವೀಂದ್ರನ್ ಮನೆಯವರಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *