KARNATAKA
ಹೊಸ ವರ್ಷಕ್ಕೆ ಎಣ್ಣೆ ಖರೀದಿ ನೆಪದಲ್ಲಿ ಸಾವಿರಾರು ಮೌಲ್ಯದ ಬಿಯರ್ ಕದ್ದು ಪರಾರಿ..!!
ಮಡಿಕೇರಿ : ಹೊಸ ವರ್ಷದ ಸಂಭ್ರಮಾಚರಣೆ ಮುಗಿದು 2024 ಕ್ಕೆ ಕಾಲಿಟ್ಟಾಗಿದೆ. ಹೊಸ ವರ್ಷ ಆಚರಣೆ ಎಣ್ಣೆ ಪ್ರಿಯರು ಮದ್ಯ ಖರೀದಿಸುವುದು ಸಾಮಾನ್ಯ. ಆದರೆ ಗ್ಯಾಂಗ್ ಒಂದು ಮದ್ಯ ಖರೀದಿಸುವ ನೆಪದಲ್ಲಿ ಕೈಚಳಕ ತೋರಿಸಿದ ಮದ್ಯ ಲೂಟಿ ಮಾಡಿ ಪರಾರಿಯಾದ ಘಟನೆ ಕೊಡಗಿನ ಕುಶಾಲನಗರದಲ್ಲಿ ಬೆಳಕಿಗೆ ಬಂದಿದೆ.
ಪ್ರವಾಸಿಗರು ಕಣ್ಣೆದುರೆ 8000 ರೂ ಮೌಲ್ಯದ ಬಿಯರ್ ಕದ್ದೊಯ್ದಿದ್ದಾರೆ. ಕುಶಾಲನಗರ ಪಟ್ಟಣದಲ್ಲಿರುವ ನ್ಯಾಷನಲ್ ವೈನ್ಸ್ ಮಳಿಗೆಗೆ ಆಗಮಿಸಿದ ಮೂವರ ತಂಡದಿಂದ ಈ ಕೃತ್ಯ ನಡೆದಿದೆ. ಮಳಿಗೆಗೆ ಪ್ರವೇಶಿಸಿದ ತಂಡದಿಂದ ಎರಡು ಕೇಸ್ ದುಬಾರಿ ಬಿಯರ್ ಖರೀದಿ ಮಾಡಿದ್ದಾರೆ. ಸ್ಕ್ಯಾನ್ ಮಾಡಿದಂತೆ ನಾಟಕವಾಡಿ ಕೊನೆಗೆ ಬಿಯರ್ ನೊಂದಿಗೆ ಪರಾರಿಯಾಗಿದ್ದಾರೆ. ಪ್ರವಾಸಿಗರ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
You must be logged in to post a comment Login