Connect with us

    LATEST NEWS

    ಶಿರೂರು ಅನುಮಾನಾಸ್ಪದ ಸಾವು : ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಶಿರೂರು ಅನುಮಾನಾಸ್ಪದ ಸಾವು : ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಉಡುಪಿ, ಜುಲೈ 19 : ಶಿರೂರು ಸ್ವಾಮೀಜಿ ಅನುಮಾನಾಸ್ಪದ ಸಾವಿನ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಶಿರೂರು ಸಹೋದರನಿಂದ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿರೂರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಗ್ರಹಿಸಿದ್ದಾರೆ.
    ಸ್ವಾಮೀಜಿ ಸಾವಿನ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಅವರು ಸಂತಾಪ ಸೂಚಿಸಿದ್ದಾರೆ.

    ಸ್ವಾಮೀಜಿ ಸಾವು ನಮಗೆ ಬೇಸರ ತಂದಿದೆ.

    ಸಾವಿನ ಬಗ್ಗೆ ಸಂಶಯ ಇರೋದಕ್ಕೆ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

    ಈ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದ ರಘುಪತಿ ಭಟ್ ಪೊಲೀಸ್ ತನಿಖೆಯಲ್ಲಿ ಸತ್ಯ ಹೊರ ಬರುತ್ತದೆ ಎಂದು ಹೇಳಿದರು.

    ಸ್ವಾಮೀಜಿ ಅವರನ್ನು ಶೀರೂರು ಮೂಲಮಠದಲ್ಲೇ ವೃಂದಾವನ ಮಾಡಲಾಗುವುದು ಮತ್ತು ಸ್ವಾಮೀಜಿಗಳು ಸೂಚಿಸಿದ ಜಾಗದಲ್ಲೇ ವೃಂದಾವನ ಮಾಡಲಾಗುವುದು ಎಂದು ರಘುಪತಿ ಭಟ್ ಸ್ಪಷ್ಟಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply