ಉಡುಪಿ ಸೆಪ್ಟೆಂಬರ್ 30: ಶಿರೂರು ದುರಂತದಲ್ಲಿ ಕೇರಳ ಲಾರಿ ಡ್ರೈವರ್ ಅರ್ಜುನ್ ಲಾರಿ ಇರುವ ಸ್ಥಳವನ್ನು ಹುಡುಕಿಕೊಟ್ಟ ಖ್ಯಾತ ಸಮಾಜಸೇವಕ ಈಶ್ವರ್ ಮಲ್ಪೆ ಅವರಿಗೆ ಬಿಜೆಪಿ ಮುಖಂಡ ಅರುಣ್ ಪುತ್ತಿಲ ಒಂದು ಲಕ್ಷ ರೂಪಾಯಿ ಸಹಾಯದನ ನೀಡಿದ್ದಾರೆ.

ಇತ್ತೀಚೆಗೆ ಶಿರೂರು ದುರಂತದಲ್ಲಿ ನಾಪತ್ತೆಯಾಗಿದ್ದ ಕೇರಳದ ಅರ್ಜುನ್ ಹಾಗೂಅವನ ಲಾರಿ ಹುದುಗಿರುವ ಸ್ಥಳವನ್ನು ಈಶ್ವರ್ ಮಲ್ಪೆ ಗುರುತಿಸಿದ್ದರು. ಆದ್ರೆ ಕೊನೆಘಳಿಗೆಯಲ್ಲಿ ಸಾವಿನ ವಿಚಾರದಲ್ಲೂ ರಾಜಕೀಯ ಆಟ ಆಡಿದ ಅಧಿಕಾರಿಗಳು ಈಶ್ವರ್ ಮಲ್ಪೆ ಹೆಸರು ಬಾರದಂತೆ ತಡೆದರು.

ಇದರಿಂದ ಈಶ್ವರ್ ಮಲ್ಪೆ ಸಾಕಷ್ಟು ನೊಂದಿದ್ದರು. ಇದನ್ನು ತಿಳಿದ ಸಾರ್ವಜನಿಕರು ಈಶ್ವರ್ ಮಲ್ಪೆಯವರಿಗೆ ಬೆಂಬಲ ಸೂಚಿಸಿದ್ದಾರೆ. ಈ ವಿಚಾರ ತಿಳಿದ ಬಿಜೆಪಿ ಮುಖಂಡ ಅರುಣ್ ಪುತ್ತಿಲ ಇಂದು ಈಶ್ವರ್ ಮಲ್ಪೆ ನಿವಾಸಕ್ಕೆ ಬಂದು ಅವರನ್ನು ಅಭಿನಂದಿಸಿ ಸಹಾಯಧನ ನೀಡಿ