Connect with us

LATEST NEWS

ಕುಡಿದ ಮತ್ತಿನಲ್ಲಿ ಮನೆಯಲ್ಲಿ ಕಿಟಕಿ ಗಾಜನ್ನು ಕೈಯಲ್ಲಿ ಒಡೆದ ಯುವಕ- ರಕ್ತ ಸ್ರಾವದಿಂದ ಸಾವು

ಮಂಗಳೂರು ಜುಲೈ 04: ಕುಡಿದ ಮತ್ತಿನಲ್ಲಿ ಮನೆಯಲ್ಲಿ ಗಲಾಟೆ ವೇಳೆ ಮನೆಯ ಬಾಲ್ಕನಿಗೆ ಅಳವಡಿಸಿದ್ದ ಅಲ್ಯುಮಿನಿಯಮ್ ಗಾಜಿಗೆ ಆವೇಶದಿಂದ ಕೈಯನ್ನ ಬಡಿದ ಪರಿಣಾಮ ರಕ್ತಸ್ರಾವದಿಂದ ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ಉಳ್ಳಾಲ ಠಾಣೆ ವ್ಯಾಪ್ತಿಯ ಮಾಡೂರು ಅರಸುನಗರ ಎಂಬಲ್ಲಿ ನಡೆದಿದೆ.


ಮಾಡೂರು ಅರಸುನಗರ ನಿವಾಸಿ ನಿತೇಶ್ ನಾಯಕ್(36) ಸಾವನ್ನಪ್ಪಿದ ವ್ಯಕ್ತಿ. ನಿತೇಶ್ ಅವರು ತಂದೆ ಸತೀಶ್ ನಾಯಕ್ ಮತ್ತು ಸಹೋದರ ದುರ್ಗೇಶ್ ಜೊತೆ ಮಾಡೂರು ಅರಸುನಗರದಲ್ಲಿ ವಾಸವಾಗಿದ್ದು ತಂದೆ ಮಕ್ಕಳು ಕರಿದ ತಿಂಡಿ ತಿನಿಸುಗಳನ್ನ ತಯಾರಿಸಿ ಅಂಗಡಿಗಳಿಗೆ ವಿತರಿಸುವ ಉದ್ಯಮ ನಡೆಸುತ್ತಿದ್ದರು.

ಗುರುವಾರ ಕರ್ತವ್ಯ ಮುಗಿಸಿ ಮನೆಗೆ ವಾಪಾಸ್ಸಾದ ಬಳಿಕ ಕೋಟೆಕಾರು ಬೀರಿ ಜಂಕ್ಷನ್ ಸಮೀಪ ತಂದೆ ಮತ್ತು ಸಹೋದರನ ಜೊತೆಗೆ ಗಲಾಟೆ ಮಾಡಿ ಬಂದಿದ್ದ ನಿತೇಶ್, ಮನೆಯಲ್ಲಿಯೂ ನಿತ್ಯದಂತೆ ಗಲಾಟೆ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ಕೋಪದಿಂದ ಮನೆಯ ಶೋಕೇಸ್ ನ ಗಾಜನ್ನು ಒಡೆದಿದ್ದು , ಈ ವೇಳೆ ಕೈಯ ನರಕ್ಕೆ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ತಿಳಿದುಬಂದಿದೆ. ಮೃತರ ತಾಯಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *