KARNATAKA
ಶಿವಮೊಗ್ಗ ಗ್ಯಾಂಗ್ ವಾರ್ ನಲ್ಲಿ ಸಾವನಪ್ಪಿದವರ ಸಂಖ್ಯೆ 3ಕ್ಕೆ ಏರಿಕೆ
ಶಿವಮೊಗ್ಗ ಮೇ 09: ನಿನ್ನೆ ಶಿವಮೊಗ್ಗದಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೌಡಿಶೀಟರ್ ಖುರೇಶಿ ಇಂದು ಸಾವನಪ್ಪಿದ್ದು, ಇದರೊಂದಿಗೆ ಗ್ಯಾಂಗ್ ವಾರ್ ನಲ್ಲಿ ಸಾವನಪ್ಪಿದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಶಿವಮೊಗ್ಗದ ಜನನಿಬಿಡ ಪ್ರದೇಶ ಮೀನು ಮಾರುಕಟ್ಟೆ ಬಳಿ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ರೌಡಿಶೀಟರ್ ಯಾಶೀನ್ ಖುರೇಶಿ ಮಟನ್ ಸ್ಟಾಲ್ನಲ್ಲಿ ಇದ್ದಿದ್ದನ್ನ ಖಚಿತ ಪಡಿಸಿಕೊಂಡ ಶೋಹಿಲ್ ಹಾಗೂ ಗೌಸ್ ತಂಡ ಏಕಾಏಕಿ ಬಂದು ಲಾಂಗು, ಮಚ್ಚಿನಿಂದ ಖುರೇಶಿ ಮೇಲೆ ಹಲ್ಲೆ ಮಾಡಿತ್ತು. ಈ ಘಟನೆಯಿಂದ ರೊಚ್ಚಿಗೆದ್ದ ಖುರೇಶಿ ಕಡೆ ಹುಡುಗರು, ಶೋಹಿಲ್ ಮತ್ತು ಗೌಸ್ ಗ್ಯಾಂಗ್ ಮೇಲೆ ಪ್ರತಿ ದಾಳಿ ಮಾಡಿ ಮಾರಕಾಸ್ತ್ರ, ಚಪ್ಪಡಿ ಕಲ್ಲು, ಸೈಕಲ್ ಎತ್ತಿ ಹಾಕಿ ಇಬ್ಬರನ್ನ ಮುಗಿಸಿತ್ತು. ಇಬ್ಬರ ಕೊಲೆಯಾಗುತ್ತಿದ್ದಂತೆ ಜೊತೆಗೆ ಬಂದಿದ್ದ ಪುಡಿ ರೌಡಿ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದೆ.
ಇತ್ತ ಹಲ್ಲೆಗೊಳಗಾದ ಖುರೇಶಿಯನ್ನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಯಾಸಿನ್ ಖುರೇಶಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ರೌಡಿಗಳ ಕಾಳಗದಲ್ಲಿ ಸೇಬು ಹಾಗು ಗೌಸ್ ಸ್ಥಳದಲ್ಲಿಯೆ ಸಾವನ್ನಪ್ಪಿದ್ದರು. ಇದೀಗ ಖುರೇಶಿ ಕೂಡ ಮೃತಪಟ್ಟಿದ್ದಾನೆ. ಪ್ರಕರಣವನ್ನು ಗಂಭೀರ ವಿಚಾರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮಾದಕ ವಸ್ತುಗಳ ಮಾರಾಟ ಜಾಲ ಪ್ರಕರಣದಲ್ಲಿ ಭಾಗಿ ಆಗಿರುವ ಶಂಕೆ ಇದೆ. ನಾಲ್ಕು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ.
You must be logged in to post a comment Login