Connect with us

    FILM

    ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಖ್ಯಾತ ನಟಿ ಸಾಯಿಪಲ್ಲವಿ

    ಉಡುಪಿ ಡಿಸೆಂಬರ್ 22: ಉಡುಪಿಯಲ್ಲಿ ತೆಲುಗು ಸಿನೆಮಾ ಚಿತ್ರಿಕರಣಕ್ಕೆ ಆಗಮಿಸಿರುವ ಖ್ಯಾತ ಚಿತ್ರನಟಿ ಸಾಯಿ ಪಲ್ಲವಿ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

    ಸಾಯಿ ಪಲ್ಲವಿ ಅವರ ಬಹು ನಿರೀಕ್ಷಿತ ತೆಲುಗು ಚಿತ್ರ ಥಾಂಡೆಲ್ ನ ಚಿತ್ರಿಕರಣ ಉಡುಪಿಯ ಮಲ್ಪೆಯಲ್ಲಿ ಆರಂಭಗೊಂಡಿದೆ. ‘ನಾಗಚೈತನ್ಯ ಈ ಸಿನೆಮಾದಲ್ಲಿ ನಟಿಸುತ್ತಿದ್ದು, ಜೋಡಿ ಲವ್‌ಸ್ಟೋರಿ ಸಿನಿಮಾದ ಅನಂತರ ಮತ್ತೆ ತೆರೆಮೇಲೆ ಪಾತ್ರವನ್ನು ಹಂಚಿಕೊಂಡಿದ್ದಾರೆ.

    ಉಡುಪಿಯಲ್ಲೇ ಚಿತ್ರಿಕರಣ ಇರುವ ಹಿನ್ನಲೆ ಇಂದು ನಟಿ ಕನಕನ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಮಾಡಿದರು. ಈ ವೇಳೆ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply