Connect with us

    KARNATAKA

    ಟೈಮಿಂಗ್‌ ವಿಚಾರ, ಉಡುಪಿಯಲ್ಲಿ ಪ್ರಯಾಣೀಕರ ಎದುರೇ ಚಪ್ಪಲ್ ಹಿಡ್ಕೊಂಡು ಕೈ ಕೈ ಮಿಲಾಯಿಸಿದ ಬಸ್ ಕಂಡಕ್ಟರ್ ಗಳು…!!

    ಉಡುಪಿ : ಬಸ್ ಟೈಮಿಂಗ್ ವಿಚಾರವಾಗಿ ಎರಡು ಬಸ್‌ ನಿರ್ವಾಹಕರ ನಡುವೆ ಪ್ರಯಾಣಿಕರು ಎದುರಲ್ಲೇ ಹೊಡೆದಾಟ ನಡೆದ ಘಟನೆ ಕುಂದಾಪುರ – ಮಂಗಳೂರು ನಡುವೆ ಸಂಚರಿಸುವ ಎರಡು ಬಸ್ ಗಳ ನಿರ್ವಾಹಕರ ಮಧ್ಯೆ ನಡೆದಿದೆ.

    ಚಪ್ಪಲಿ ಎತ್ತಿ ಲೇಡಿ ಕಂಡಕ್ಟರ್‌ ಮತ್ತೋರ್ವ ಬಸ್‌ ನಿರ್ವಾಹಕ ನೊಂದಿಗೆ ಪ್ರಯಾಣಿಕರ ಎದುರೇ ಅವಾಚ್ಯ ಶಬ್ದಗಳಿಂದ ಬೈದಾಡಿ ಪರಸ್ಪರ ಜಗಳವಾಡಿದ್ದಾರೆ. ಭಾರತಿ ಬಸ್ ನ ಲೇಡಿ ಕಂಡಕ್ಟರ್ , ದುರ್ಗಾಪ್ರಸಾದ್ ಬಸ್ಸಿನ ಕಂಡಕ್ಟರ್  ಸಂತೆಕಟ್ಟೆಯಲ್ಲಿ ಬಸ್ ನಿಲ್ಲಿಸಿದ್ದಾಗ ದುರ್ಗಾಪ್ರಸಾದ್ ಬಸ್ ನೊಳಗೆ ಬಂದು ಜಗಳವಾಡಿದ  ಪರಸ್ಪರ ಇಬ್ಬರು ಅವಾಚ್ಯ ಶಬ್ದಗಳ ಬಳಸಿ ಪ್ರಯಾಣೀಕರ ಎದುರೇ ಕೈ ಕೈ ಮಿಲಾಯಿಸಿದ್ದಾರೆ.

    ಸದ್ಯ ಕಂಡಕ್ಟರ್ ಗಳು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉಡುಪಿಯ ಪ್ರಥಮ ಮಹಿಳಾ ಬಸ್ ಕಂಡಕ್ಟರ್ ಆಗಿ ಹೆಸರು ಮಾಡಿದ್ದ ಈಕೆ ಕಳೆದ ಹಲವು ವರ್ಷಗಳಿಂದ ಉಡುಪಿ- ಕುಂದಾಪುರ ನಡುವೆ ಸಂಚರಿಸುವ ಭಾರತಿ ಮೋಟಾರ್ಸ್ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖಾಸಾಗಿ ಬಸ್‌ ಸಿಬಂದಿಗಳ ಈ ರೀತಿಯ ದುಂಡಾವರ್ತನೆ ಬಸ್ ಪ್ರಯಾಣಿಕರು ರೋಸಿ ಹೋಗಿದ್ದು ಇಂತಹ ಮುಜುಗರ ಸನ್ನಿವೇಶಗಳ ಮಾಡುವವರ ವಿರುದ್ದ ಕಠಿಣ ಕ್ರಮಕ್ಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply