BANTWAL
ಯುವತಿಯ ಮೇಲೆ ಕಾಂಗ್ರೇಸ್ ಕಾರ್ಯಕರ್ತನ ಜೊಲ್ಲು, ಮಾನ ಉಳಿಸಿದ ಕಲ್ಲು
ಯುವತಿಯ ಮೇಲೆ ಕಾಂಗ್ರೇಸ್ ಕಾರ್ಯಕರ್ತನ ಜೊಲ್ಲು, ಮಾನ ಉಳಿಸಿದ ಕಲ್ಲು
ಬಂಟ್ವಾಳ,ಅಕ್ಟೋಬರ್ 17: ಸದಾ ಇನ್ನೊಬ್ಬರಿಗೆ ಸಭ್ಯತೆಯ ಪಾಠ ಹೇಳುವ ಹಾಗೂ ಯಾರಾದರೂ ಈ ಸಭ್ಯತೆಯನ್ನು ಮೀರಿದಾಗ ಬಾಯಿ ಬಡಿದುಕೊಳ್ಳುವ ಕಾಂಗ್ರೇಸ್ ಪಕ್ಷಕ್ಕೆ ಭಾರೀ ಮುಜುಗರವಾಗುವ ಘಟನೆಯೊಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಕಾಂಗ್ರೇಸ್ ಪಕ್ಷದ ಮುಖಂಡೆಯೊಬ್ಬರ ಮಗನೇ ಇದೀಗ ಯುವತಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಯುವತಿಯ ಪೋಷಕರು ಯುವ ಕಾಂಗ್ರೇಸ್ ಕಾರ್ಯಕರ್ತ ವಿರುದ್ಧ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಜೀಪಮೂಡ ಗ್ರಾಮ ಪಂಚಾಯತ್ ಸದಸ್ಯೆಯಾಗಿರುವ ಕಾಂಗ್ರೇಸಿನ ಮಹಿಳಾ ಮುಖಂಡೆಯೊಬ್ಬರ ಪುತ್ರ ಜಯಂತ (20ವಷ೯) ಈ ಕೃತ್ಯ ಎಸಗಿದ್ದು, ಎರಡು ದಿನಗಳ ಹಿಂದೆ ಈ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಬಂಟ್ವಾಳದ ಸಜೀಪಮೂಡದ ಮಿತ್ತಮಜಲು ಎಂಬಲ್ಲಿ ಯುವತಿಯೊವ೯ಳು ಮನೆಯಿಂದ ಕೆಲಸಕ್ಕೆಂದು ಹೋಗುತ್ತಿರುವ ಸಂದರ್ಭದಲ್ಲಿ ಯಾರೂ ಇಲ್ಲದ ನಿಜ೯ನ ಪ್ರದೇಶದಲ್ಲಿ ಆಕೆಯನ್ನು ಅಡ್ಡಗಟ್ಟಿ ಈತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ದೂರಲಾಗಿದೆ. ಯುವತಿ ಆತನಿಗೆ ಕಲ್ಲಿನಿಂದ ಹೊಡೆದು ತಪ್ಪಿಸಿಕೊಂಡು ಓಡುವಾಗ ಬಡಿಗೆಯಿಂದ ಆಕೆಯ ತಲೆಗೆ ಹೊಡೆದಿದ್ದು, ಗಂಭೀರ ಗಾಯಗೊಂಡು ಭಯಬೀತಳಾಗಿ ಗದ್ದೆಯಲ್ಲಿ ಓಡಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಯುವತಿಯನ್ನು ಮತ್ತೆ ಬೆನ್ನಟ್ಟಿ ಕೊಲೆ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಯುವತಿಯ ಕಿರುಚಾಟ ಕೇಳಿ ರಕ್ಷಣೆಗಾಗಿ ಬಂದ ಸ್ಥಳೀಯರನ್ನು ಕಂಡು ಆರೋಪಿ ಜಯಂತ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈತ ಹಲವಾರು ದಿನಗಳಿಂದ ಈ ಯುವತಿಯನ್ನು ಹಿಂಬಾಲಿಸುತ್ತಿದ್ದು, ಯುವತಿ ಅನುಮಾನಗೊಂಡು ತನ್ನ ಬ್ಯಾಗಿನಲ್ಲಿ ಕಲ್ಲೊಂದನ್ನು ಇಟ್ಟುಕೊಂಡಿದ್ದಳು. ರಕ್ಷಣೆಗೆಂದು ಮುನ್ನೆಚ್ಚರಿಕೆ ವಹಿಸಿಕೊಂಡು ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದ ಕಲ್ಲು ಯುವತಿಯ ಮಾನ ಪ್ರಾಣ ಉಳಿಸಿದೆ ಎಂದು ತಿಳಿದುಬಂದಿದೆ.ಜಿಲ್ಲೆಯಲ್ಲಿ ನಡೆದ ಪಬ್ ದಾಳಿ, ಹೋಂ ಸ್ಟೇ ದಾಳಿಯಾದಾಗ ತಿಂಗಳುಗಟ್ಟಲೆ ಬೀದಿ ಹೋರಾಟ ನಡೆಸಿದ ಕೆಲವು ಸಂಘಟನೆಗಳು ಇದೀಗ ಇದೊಂದು ಗಂಬೀರ ಪ್ರಕರಣವೆಂದು ತಿಳಿದಿದ್ದರೂ, ಬಾಯಿಮುಚ್ಚಿ ಕುಳಿತಿದೆ. ಮಹಿಳಾ ಹೋರಾಟಗಾರರು ಇನ್ನೂ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ ಎನ್ನುವ ಆರೋಪಗಳೂ ಕೇಳಿ ಬರುತ್ತಿದೆ.
You must be logged in to post a comment Login