FILM
ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಅಫ್ ಹೇಳಿದ ಸೂಪರ್ ಸ್ಟಾರ್ ರಜನಿಕಾಂತ್….!!
ಬೆಂಗಳೂರು ಅಕ್ಟೋಬರ್ 26: ಕಾಂತಾರ ಸಿನೆಮಾ ಮೋಡಿ ಮತ್ತೆ ಮುಂದುವರೆದಿದ್ದು, ಪ್ರಖ್ಯಾತ ನಟ ನಟಿಯರು ಸಿನೆಮಾ ನೋಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಕಾಂತಾರ ಸಿನೆಮಾವನ್ನು ನೋಡಿ ಟ್ವೀಟರ್ ನಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು, ಸಿನೆಮಾ ನೋಡಿ ಮೈರೋಮಾಂಚನವಾಯಿತು ಎಂದಿದ್ದಾರೆ.
ಗೊತ್ತಿರುವುದಕ್ಕಿಂತ ಗೊತ್ತಿರದ ವಿಷಯಗಳೇ ಜಾಸ್ತಿ ಆದರೆ ಕಾಂತಾರ ಸಿನೆಮಾದಲ್ಲಿ ಹೇಳಿರುವ ವಿಷಯಗಳನ್ನು ಮತ್ತೆ ಯಾರೂ ಈ ರೀತಿಯಾಗಿ ಯಾರೂ ಹೇಳುವುದಿಲ್ಲ ಎಂದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಡಿ ಮೂಡಿಬಂದ ಕಾಂತಾರ ಚಿತ್ರ ನೋಡಿ ನನ್ನ ಮೈನವಿರೇಳಿತುಎಂದ ಅವರು ಬರಹಗಾರನಾಗಿ ನಿರ್ದೇಶಕನಾಗಿ ರಿಷಬ್ ಶೆಟ್ಟಿ ಅವರಿಗೆ ಹ್ಯಾಟ್ಸ್ ಆಫ್ ಎಂದಿದ್ದಾರೆ.
You must be logged in to post a comment Login