Connect with us

    LATEST NEWS

    ಬಾಂಧವ್ಯ ಕ್ರಿಕೆಟ್ ಪಂದ್ಯಾಟ ಗೆದ್ದ ಪುತ್ತೂರು ಪ್ರೆಸ್ ಕ್ಲಬ್

    ಬಾಂಧವ್ಯ ಕ್ರಿಕೆಟ್ ಪಂದ್ಯಾಟ ಗೆದ್ದ ಪುತ್ತೂರು ಪ್ರೆಸ್ ಕ್ಲಬ್

    ಪುತ್ತೂರು ಜನವರಿ 7: ಪುತ್ತೂರಿನಲ್ಲಿ ನಡೆದ ವಿವಿಧ ಇಲಾಖಾ ಮಟ್ಟದ ಬಾಂಧವ್ಯ ಕ್ರಿಕೆಟ್ ಪಂದ್ಯಾಟದಲ್ಲಿ ಪುತ್ತೂರು ಪ್ರೆಸ್ ಕ್ಲಬ್ ತಂಡ ಚಾಂಪಿಯನ್ ಟ್ರೋಫಿಯನ್ನು ತನ್ನ ಮುಡಿಗೇರಿಸಿದೆ.

    ಜನವರಿ 6 ರಂದು ಪುತ್ತೂರು ವಿವೇಕಾನಂದ ಕಾಲೇಜು ಮೈದಾನದಲ್ಲಿ ವಕೀಲರ ಹಾಗೂ ಪ್ರೆಸ್ ಕ್ಲಬ್ ತಂಡಗಳ ನಡುವೆ ನಡೆದ ರೋಚಕ ಪೈನಲ್ ಪಂದ್ಯದಲ್ಲಿ ಟ್ರಾಸ್ ಗೆದ್ದು , ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ಪ್ರೆಸ್ ಕ್ಲಬ್ ತಂಡದ ವಿರುದ್ಧ ವಕೀಲರ ತಂಡ ನಿಗದಿತ ಮೂರು ಓವರ್ ಗಳಲ್ಲಿ 48 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು.

    ಬಳಿಕ ಬ್ಯಾಟ್ ನಡೆಸಿದ ಪ್ರೆಸ್ ಕ್ಲಬ್ ತಂಡ ಮೊದಲ ಓವರ್ ನಲ್ಲೇ ತನ್ನ ಪ್ರಮುಖ ಎರಡು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ತಂಡಕ್ಕೆ ಆಸರೆಯಾಗಿ ನಿಂತ ತಂಡದ ಆಟಗಾರ ಶೋಭರಾಜ್ ವಕೀಲರ ತಂಡದ ಸ್ಟಾರ್ ಆಟಗಾರ ನವಾಝ್ ಎಸೆತದ ಒಂದೇ ಓವರ್ ನಲ್ಲಿ 5 ಸಿಕ್ಸರ್ ಭಾರಿಸುವ ಮೂಲಕ ಪ್ರೆಸ್ ಕ್ಲಬ್ ತಂಡವನ್ನು ಗೆಲುವಿನ ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ. ವಕೀಲರ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

    ವರ್ತಕರ ತಂಡ ಮತ್ತು ಸುದ್ದಿ ಬಿಡುಗಡೆ ತಂಡ ಕ್ರಮವಾಗಿ ತೃತೀಯ ಹಾಗೂ ಚತುರ್ಥ ಪ್ರಶಸ್ತಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಪಂದ್ಯಾಟದಲ್ಕಿ ಕಂದಾಯ ಇಲಾಖೆ, ಪೋಲೀಸ್ ಇಲಾಖೆ, ಸಹಕಾರಿ ಬ್ಯಾಂಕ್, ವೈದ್ಯರ ತಂಡ, ಮೆಸ್ಕಾಂ ತಂಡ, ಜ್ಯುವೆಲ್ಲರಿ ವರ್ಕರ್ಸ್ ತಂಡ, ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ತಂಡ , ದೈಹಿಕ ಶಿಕ್ಷಕರ ತಂಡಗಳು ಭಾಗವಹಿಸಿದ್ದವು.ವಿಜೇತ ತಂಡಗಳಿಗೆ ಪುತ್ತೂರು ನಗರ ಪೋಲಿಸ್ ಇನ್ಸ್ ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಸೇರಿದಂತೆ ಹಲವು ಗಣ್ಯರು ಪ್ರಶಸ್ತಿ ವಿತರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply