Connect with us

    DAKSHINA KANNADA

    ಪುತ್ತೂರು : ಆನಾರೋಗ್ಯದಿಂದ ಸರ್ಕಾರಿ ಅಂಗಡಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದಕ್ಕೆ ಅಂಗಡಿಯೇ ಏಲಂ..!

    ಪುತ್ತೂರು : ಆನಾರೋಗ್ಯ ನಿಮಿತ್ತ ಸರಕಾರಿ ಅಂಗಡಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದ ಕಾರಣ ಅಂಗಡಿಯನ್ನು ಏಲಂ ಮಾಡಿ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದೌರ್ಜನ್ನ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

    ಅಂಗಡಿಯಿಂದ ಹೊರ ಹಾಕಲ್ಪಟ್ಟ ಮಹಿಳೆ ಈ ಆರೋಪ ಮಾಡಿದ್ದು ಮಹಿಳೆಯ ಪತಿ ರಾಜ್ ಬಪ್ಪಳಿಗೆ ನ್ಯಾಯಕ್ಕಾಗಿ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಹೇಮಲತಾ ಎನ್ನುವ ಮಹಿಳೆಗೆ ಈ ಅಂಗಡಿ ಏಲಂ ಆಗಿತ್ತು. ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ ಆದ್ದರಿಂದ ಸುಮಾರು 72 ಸಾವಿರ ರೂಪಾಯಿ ಬಾಡಿಗೆ ಬಾಕಿಯಿತ್ತು . ಈ ಹಿನ್ನೆಲೆಯಲ್ಲಿ ಆರು ತಿಂಗಳ ಸಮಯಾವಕಾಶ ಕೋರಿ ದ.ಕ. ಜಿಲ್ಲಾ ಪಂಚಾಯತ್ ಸಿಇಒ ಸೇರಿದಂತೆ ಪುತ್ತೂರು ಇ.ಒ ರಿಗೂ ಮನವಿ ಮಾಡಲಾಗಿತ್ತು ಆದ್ರೆ ಈ ಮಧ್ಯೆ ಉದ್ಧೇಶಪೂರ್ವಕವಾಗಿ ಅಂಗಡಿಯನ್ನು ತೆರವುಗೊಳಿಸಲಾಗಿದೆ ಏಮದು ಆರೋಪಿಸಿದ್ದಾರೆ. ಏಲಂ ಪಡೆಯುವ ಮೊದಲು 1 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಲಾಗಿದೆ. ಬಾಕಿ ಬಾಡಿಗೆಗಿಂತ ಜಾಸ್ತಿ ಅಡ್ವಾಸ್ ಹಣವಿತ್ತು ಆದರೂ ಯಾವುದೇ ಸೂಚನೆ ನೀಡದೆ ಅಂಗಡಿಯೊಳಗಿನ ಸಾಮಾಗ್ರಿಗಳನ್ನೂ ಬಿಡದೆ ಏಲಂ ಮಾಡಿದ್ದಾರೆ. ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳು ನಷ್ಟವಾಗಿದೆ ಏಮದು ಮಹಿಳೆಯ ಪತಿ ರಾಜ್ ಬಪ್ಪಳಿಗೆ ಆರೋಪಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply