Connect with us

    KARNATAKA

    ಪುನೀತ್ ಗೆ ಸಾವಿನ ಮುನ್ಸೂಚನೆ ನೀಡಿತ್ತೇ ಮಂತ್ರಾಲಯದ ವೀಣೆ…ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ…!!

    ಬೆಂಗಳೂರು ಅಕ್ಟೋಬರ್ 31: ಪುನೀತ್ ರಾಜ್ ಕುಮಾರ್ ಅವರಿಗೆ ಸಾವಿನ ಮುನ್ಸೂಚನೆ ಮುಂಚೆಯೇ ಸಿಕ್ಕಿತ್ತಾ ಎನ್ನುವಂತೆ ಇರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಪುನೀತ್ ರಾಜಕುಮಾರ್ ಅವರು 2020 ರ ಮಾರ್ಚ್‌ನಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ಬಂದಿದ್ದ ವೇಳೆ ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದ್ದರು. ಮಾತನಾಡುತ್ತಾ ‘ಮುಂದಿನ‌ ವರ್ಷದ ಆರಾಧನೆ’ಗೆ ಬರುತ್ತೇನೆ’ ಎಂದು ಹೇಳುತ್ತಿದ್ದಂತೆ ಪಕ್ಕದ ಸಿಂಹಾಸನ ಮೇಲಿದ್ದ ಬೆಳ್ಳಿ ವೀಣೆಯೊಂದಿಗೆ, ರಾಯರ ಉತ್ಸವ ಪ್ರತಿಮೆಯೂ ಜಾರಿಕೊಳ್ಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡುಬಂದ ಪುನೀತ್ ರಾಜಕುಮಾರ್ ಅವರು ಮಾತು ಸ್ವಲ್ಪ ನಿಲ್ಲಿಸಿ ಆನಂತರ ಮುಂದುವರಿಸುತ್ತಾರೆ.

    ಮಂತ್ರಾಲಯ ಮಠದ ಈ ವೀಣೆಯು ಸಾವಿನ ಮುನ್ಸೂಚನೆ ನೀಡಿತ್ತೇ? ಎನ್ನುವುದು ಭಕ್ತ ಸಮುದಾಯ ಹಾಗೂ ಅಭಿಮಾನಿಗಳನ್ನು ಯೋಚನೆಗೀಡು ಮಾಡಿದೆ. ಒಂದುವರೆ ವರ್ಷದ ಹಿಂದೆ ಮಠದ ವೆಬ್ ಸೈಟ್ ‘ಮಂತ್ರಾಲಯ ವಾಹಿನಿ’ಯಿಂದ‌‌ ಸೆರೆ ಹಿಡಿದಿದ್ದ ಈ ವಿಡಿಯೋ ತುಣುಕು ಇದೀಗ ವೈರಲ್ ಆಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply