Connect with us

LATEST NEWS

ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ಮಾತಾಡಲು ಬಿಜೆಪಿ ಸಂಸದರಿಗೆ ಭಯ – ಇಂಧನ ಸಚಿವ ಕೆ.ಜೆ ಜಾರ್ಜ್

ಉಡುಪಿ ಫೆಬ್ರವರಿ 05: ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಫೆಬ್ರವರಿ 7 ರಂದು ನಾವು ಪ್ರತಿಭಟನೆ ಮಾಡುತ್ತಿವೆ ಎಂದು ಇಂದನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.


ಉಡುಪಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರದಿಂದ ತೆರಿಗೆ ವಿಚಾರದಲ್ಲಿ ಮಾತ್ರ ಬರದಲ್ಲೂ ಅನ್ಯಾಯ ಆಗಿದೆ. ನಾವು ವರದಿ ಸಿದ್ಧಮಾಡಿ ಸಲ್ಲಿಕೆ ಮಾಡಿದರೂ ಒಂದು ಸಭೆ ಕರೆದಿಲ್ಲ, ರಾಜ್ಯ ಸರಕಾರ ಈಗಾಗಲೇ ನಮ್ಮ ಕೈಲಾದಷ್ಟು ಬಿಡುಗಡೆ ಮಾಡಿ ಹಂಚಿದ್ದೇವೆ. ನಾವು ಕೊಟ್ಟ ತೆರಿಗೆಯಲ್ಲಿ ಸಹಾಯ ಕೇಳುತ್ತಿದ್ದೇವೆ. ನಿಯಮ ಪ್ರಕಾರ ಅನುದಾನ ಬಿಡುಗಡೆ ಮಾಡಲಿ ಎಂದರು.

ಬಿಜೆಪಿ ಎಂಪಿಗಳು, ಕೇಂದ್ರ ಸಚಿವರು ಆಸಕ್ತಿ ವಹಿಸಿ ರಾಜ್ಯ ಸರಕಾರಕ್ಕೆ ಬರಬೇಕಾದ ಹಣ ಬಿಡುಗಡೆ ಮಾಡಿಸಲಿ, ನಮಗೆ ಮಾತ್ರನಾ? ನಿಮಗೂ ಜನ ಓಟು ಕೊಟ್ಟಿಲ್ವಾ? ಎಂದು ಪ್ರಶ್ನಿಸಿದ ಅವರು ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ಮಾತಾಡಲು ಬಿಜೆಪಿ ಸಂಸದರಿಗೆ ಭಯ, ಅಲ್ಲದೆ ಅವರಿಗೆ ಮೋದಿ , ಗೃಹ ಸಚಿವರ ಮುಂದೆ ನಿಂತು ಕೇಳುವ ಧೈರ್ಯ ಸ್ಥೈರ್ಯ ಕಡಿಮೆ ಇದ್ದಾಗೆ ಕಾಣ್ತದೆ ಎಂದರು.

ಕಾಂಗ್ರೆಸ್ ಪಕ್ಷ ಚುನಾವಣೆ ತಯಾರು ಆಗುವ ಪಕ್ಷ ಅಲ್ಲ, ಸತತ ಜನರ ನಡುವೆ ನಾವಿದ್ದು ಚುನಾವಣೆ ಎದುರಿಸ್ತೇವೆ. ಜನರಿಗೆ ಪಕ್ಷ ಕೊಟ್ಟ ಭರವಸೆ ಈಡೇರಿಸಲಾಗಿದೆ. ಚುನಾವಣೆ ಪೂರ್ವ ಸಿದ್ಧತೆಗಾಗಿ ನಾನು ಜಿಲ್ಲೆಗೆ ಬಂದಿದ್ದೇನೆ, ಕರಾವಳಿ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು ಜನ ನಮ್ಮಜೊತೆ ಇದ್ದರು, ಕೆಲವೊಂದು ಕಾರಣದಿಂದ ಬಿಜೆಪಿ ಜೊತೆ ಹೋಗಿರಬಹುದು ಆದರೆ ನಂಬಿಕೆ ಇದೆ ಜನ ನಮ್ಮ ಕೈಹಿಡಿಯುತ್ತಾರೆಂಬ ಆತ್ಮವಿಶ್ವಾಸ ಇದೆ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *