Connect with us

    LATEST NEWS

    ಮಲಗಿಕೊಂಡೆ ಪೂಜೆ ಮಾಡಬೇಕಾದ ಪರಿಸ್ಥಿತಿ – ಪೇಜಾವರ ವಿಶ್ವೇಶ ತೀರ್ಥ ಸ್ವಾಮಿಜಿ

    ಮಲಗಿಕೊಂಡೆ ಪೂಜೆ ಮಾಡಬೇಕಾದ ಪರಿಸ್ಥಿತಿ – ಪೇಜಾವರ ವಿಶ್ವೇಶ ತೀರ್ಥ ಸ್ವಾಮಿಜಿ

    ಉಡುಪಿ ಜನವರಿ 24: ಇತ್ತೀಚೆಗೆ ಕಾರಿನಲ್ಲಿ ತೆರಳುವಾಗ ಆದ ಸಣ್ಣ ಅಪಘಾತದಲ್ಲಿ ಬೆನ್ನು ನೋವಿಗೆ ತುತ್ತಾಗಿ ವಿಶ್ರಾಂತಿ ಪಡೆಯುತ್ತಿರುವ ಪೇಜಾವರ ಶ್ರೀಗಳನ್ನು ಕೇಂದ್ರ ಸಚಿವೆ, ಪೇಜಾವರ ಶ್ರೀಗಳ ಶಿಷ್ಯೆ ಉಮಾಭಾರತಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು ನಡೆಯುವುದಕ್ಕೆ, ಪೂಜೆ ಮಾಡುವುದಕ್ಕೆ ಆಗುವುದಿಲ್ಲ, ಕುಳಿತುಕೊಳ್ಳುವಾಗ ಬೆನ್ನು ನೋವು ಕಾಡುತ್ತದೆ ಎಂದು ಹೇಳಿದರು. ಈಗ ಮಲಗಿಕೊಂಡೆ ಪೂಜೆ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದರು, ” ಮಲಗಿ ಪರಮಾಧರಧಿ ಪಾಡಲು” ಎಂದು ದಾಸರ ಕೀರ್ತನೆಯನ್ನು ಪೇಜಾವರ ಶ್ರೀಗಳು ಉಚ್ಚರಿಸಿದರು. ಭೀಷ್ಮಾರ್ಚಯರ ಹಾಗೆ ಮಲಗಿದ್ದೇನೆ. 3 ವಾರಗಳ ವಿಶ್ರಾಂತಿ ಬೇಕು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.

    ವಿಶ್ರಾಂತಿ ದೊಡ್ಡ ವಿಷಯವಲ್ಲ ಆದರೆ ಏನು ಕೆಲಸವಿಲ್ಲದೆ ವಿಶ್ರಾಂತಿ ಕಷ್ಟದ ಕೆಲಸ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಕಾಲ ಕಳೆಯಬಹುದು ಎಂದು ಪೇಜಾವರ ಶ್ರೀ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply