Connect with us

    LATEST NEWS

    ಪಂಚಾಯತ್ ಪಿಡಿಓ ರಾಸಲೀಲೆ ಪ್ರಕರಣ- ಶಿಸ್ತು ಕ್ರಮಕ್ಕೆ ಆಗ್ರಹ

    ಪಂಚಾಯತ್ ಪಿಡಿಓ ರಾಸಲೀಲೆ ಪ್ರಕರಣ- ಶಿಸ್ತು ಕ್ರಮಕ್ಕೆ ಆಗ್ರಹ

    ಉಡುಪಿ ಎಪ್ರಿಲ್ 11: ಪಂಚಾಯತ್ ಪಿಡಿಓ ಒಬ್ಬನ ರಾಸಲೀಲೆ ಪ್ರಕರಣವೊಂದು ಬಯಲಾಗಿದೆ.ಕುಂದಾಪುರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ಪಿಡಿಓ ಅನಂತ ಪದ್ಮನಾಭ್ ನಾಯಕ್ ಮಹಿಳಾ ಸಿಬ್ಬಂದಿಯ ಜೊತೆ ರಾಸಲೀಲೆ ನಡೆಸಿದ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

    ಅನಂತ ಪದ್ಮನಾಭ ನಾಯಕ್ ಒಂದು ವರುಷದಿಂದ ನಾಲ್ಕೂರು ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಕರ್ತವ್ಯದ ವೇಳೆ ಸರ್ಕಾರಿ ಕಚೇರಿಯಲ್ಲೆ ಕಾಮದಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಿವಾಹಿತ ಯುವತಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

    ಮಹಿಳಾ ಸಿಬ್ಬಂದಿಯ ಜೊತೆ ಅಸಭ್ಯ ವರ್ತನೆ ನಡೆಸಿರುವುದಲ್ಲದೇ ಕಾನೂನು ಬಾಹಿರ ಚಟುವಟಿಕೆ,ಭ್ರಷ್ಟಚಾರದಲ್ಲಿ ಭಾಗಿಯಾಗಿರುವ ಆರೋಪ ಕೂಡ ಈತನ ಮೇಲಿದೆ. ಎಕ್ಸ್ ಮಿಲಿಟರಿ ಅಫೀಸರ್ ಅಗಿರುವ ಈತ ಸರ್ಕಾರಿ ಕಚೇರಿಯಲ್ಲಿ ಯುವತಿಯನ್ನು ತನ್ನ ತೃಷೆ ಬಳಸಿಕೊಂಡಿರುವು ಸಮತಾ ಸೈನಿಕ ದಳ ಖಂಡಿಸಿದೆ. ಪಿಡಿಓ ಅನಂತ ಪದ್ಮನಾಭ ನಾಯಕ್ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದೆ. ಯುವತಿಯನ್ನು ಆತ್ಯಾಚಾರ ಹಾಗೂ ಕರ್ತವ್ಯ ಲೋಪ ನಡೆಸಿರುವುದರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಕೆಲಸದಿಂದ ವಜಾ ಮಾಡಬೇಕು ಎಂದು ಸಮತಾ ಸೈನಿಕ ದಳ ಒತ್ತಾಯಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply