Connect with us

    National

    ಕೊರೊನಾಗೆ ಔಷಧಿ ಕಂಡು ಹಿಡಿದ ಪತಂಜಲಿ

    5-14 ದಿನಗಳಲ್ಲಿ ಸಂಪೂರ್ಣ ಗುಣಮುಖರಾದ ಕೊರೊನಾ ರೋಗಿಗಳು

    ನವದೆಹಲಿ ಜೂನ್ 14: ವಿಶ್ವದ ದಿಗ್ಗಜ ಔಷಧಿ ಕಂಪೆನಿಗಳು ಕೊರೊನಾಗೆ ಚಿಕಿತ್ಸೆ ಕಂಡು ಹಿಡಿಯಲು ಸಂಶೋಧನೆಗಳನ್ನು ನಡೆಸುತ್ತಿರುವ ಬೆನ್ನಲೆ ಬಾಬಾ ರಾವ್ ದೇವ್ ಅವರ ಆಯುರ್ವೇದ ಔಷಧ ಕಂಪೆನಿ ಕೊರೊನಾ ಸೊಂಕಿಗೆ ಔಷಧ ಕಂಡು ಹಿಡಿದಿದ್ದೇವೆ ಎಂದು ತಿಳಿಸಿದೆ.


    ಈ ಕುರಿತಂತೆ ಸುದ್ದಿ ಸಂಸ್ಥೆ ಎಎನ್ ಐಗೆ ಸಂದರ್ಭ ನೀಡಿರುವ ಪತಂಜಲಿ ಸಂಸ್ಥೆಯ ಸಹ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಕೊರೊನಾಗೆ ಸೂಕ್ತ ಚಿಕಿತ್ಸೆಯನ್ನು ನಾವು ಕಂಡು ಹಿಡಿದಿದ್ದು, ಅದನ್ನು ಈಗಾಗಲೇ ಕೊರೊನಾ ಪಾಸಿಟಿವ್​ ಬಂದಿರುವ ರೋಗಿಯ ಮೇಲೆ ಪ್ರಯೋಗಿಸಲಾಗಿದೆ.


    ಇದರಲ್ಲಿ 100 ಪರ್ಸೆಂಟ್​ ಫಲಿತಾಂಶ ಬಂದಿದೆ. ರೋಗಿಗಳು 5-14 ದಿನಗಳ ಒಳಗಾಗಿ ಗುಣಮುಖರಾಗಿದ್ದಾರೆ ಎಂದಿದ್ದು ನಾವು ಕೊರೊನಾವನ್ನು ಆಯುರ್ವೇದದಿಂದ ಗುಣಪಡಿಸ್ತೇವೆ ಎಂದಿದ್ದಾರೆ. ಇನ್ನೂ ನಾಲ್ಕೈದು ದಿನದಲ್ಲಿ ಈ ಬಗ್ಗೆ ಸಾಕ್ಷಿ ಹಾಗೂ ಡೇಟಾಗಳನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply