National
ಕೊರೊನಾಗೆ ಔಷಧಿ ಕಂಡು ಹಿಡಿದ ಪತಂಜಲಿ
5-14 ದಿನಗಳಲ್ಲಿ ಸಂಪೂರ್ಣ ಗುಣಮುಖರಾದ ಕೊರೊನಾ ರೋಗಿಗಳು
ನವದೆಹಲಿ ಜೂನ್ 14: ವಿಶ್ವದ ದಿಗ್ಗಜ ಔಷಧಿ ಕಂಪೆನಿಗಳು ಕೊರೊನಾಗೆ ಚಿಕಿತ್ಸೆ ಕಂಡು ಹಿಡಿಯಲು ಸಂಶೋಧನೆಗಳನ್ನು ನಡೆಸುತ್ತಿರುವ ಬೆನ್ನಲೆ ಬಾಬಾ ರಾವ್ ದೇವ್ ಅವರ ಆಯುರ್ವೇದ ಔಷಧ ಕಂಪೆನಿ ಕೊರೊನಾ ಸೊಂಕಿಗೆ ಔಷಧ ಕಂಡು ಹಿಡಿದಿದ್ದೇವೆ ಎಂದು ತಿಳಿಸಿದೆ.
ಈ ಕುರಿತಂತೆ ಸುದ್ದಿ ಸಂಸ್ಥೆ ಎಎನ್ ಐಗೆ ಸಂದರ್ಭ ನೀಡಿರುವ ಪತಂಜಲಿ ಸಂಸ್ಥೆಯ ಸಹ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಕೊರೊನಾಗೆ ಸೂಕ್ತ ಚಿಕಿತ್ಸೆಯನ್ನು ನಾವು ಕಂಡು ಹಿಡಿದಿದ್ದು, ಅದನ್ನು ಈಗಾಗಲೇ ಕೊರೊನಾ ಪಾಸಿಟಿವ್ ಬಂದಿರುವ ರೋಗಿಯ ಮೇಲೆ ಪ್ರಯೋಗಿಸಲಾಗಿದೆ.
ಇದರಲ್ಲಿ 100 ಪರ್ಸೆಂಟ್ ಫಲಿತಾಂಶ ಬಂದಿದೆ. ರೋಗಿಗಳು 5-14 ದಿನಗಳ ಒಳಗಾಗಿ ಗುಣಮುಖರಾಗಿದ್ದಾರೆ ಎಂದಿದ್ದು ನಾವು ಕೊರೊನಾವನ್ನು ಆಯುರ್ವೇದದಿಂದ ಗುಣಪಡಿಸ್ತೇವೆ ಎಂದಿದ್ದಾರೆ. ಇನ್ನೂ ನಾಲ್ಕೈದು ದಿನದಲ್ಲಿ ಈ ಬಗ್ಗೆ ಸಾಕ್ಷಿ ಹಾಗೂ ಡೇಟಾಗಳನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.
You must be logged in to post a comment Login