Connect with us

LATEST NEWS

ಪಣಂಬೂರು ಕಡಲಲ್ಲಿ ನಾಪತ್ತೆಯಾಗಿದ್ದ ಮೂವರಲ್ಲಿ ಇಬ್ಬರ ಮೃತದೇಹ ಪತ್ತೆ

ಸುರತ್ಕಲ್‌ ಮಾರ್ಚ್ 5 : ಪಣಂಬೂರು ಕಡಲ ಕಿನಾರೆಯಲ್ಲಿ ಈಜಲು ತೆರಳಿದ್ದ ವೇಳೆ ಅಲೆ ಹೊಡೆತಕ್ಕೆ ಸಮುದ್ರ ಪಾಲಾಗಿದ್ದ ಮೂವರು ಯುವಕರಲ್ಲಿ ಇಬ್ಬರ ಮೃತದೇಹ ಪಣಂಬೂರು ಸಮೀಪದ ಕೋರಿಕಟ್ಟ ಬಳಿ ಅರಬ್ಬಿಸಮುದ್ರದಲ್ಲಿ ಸೋಮವಾರ ಪತ್ತೆಯಾಗಿವೆ.


ಸಮುದ್ರ ಪಾಲಾಗಿದ್ದ ಮಿಲನ್‌ (20 ವರ್ಷ) ಹಾಗೂ ನಾಗರಾಜ್‌ (24) ಅವರ ಮೃತದೇಹಗಳು ಪತ್ತೆಯಾಗಿದೆ. ಲಖಿತ್‌ (18) ಅವರಿಗಾಗಿ ಸೋಮವಾರ ದಿನವಿಡಿ ಸ್ಥಳೀಯ ಮೀನುಗಾರರು, ಇಲಾಖೆ ಸಿಬ್ಬಂದಿ ಅರಬ್ಬಿ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದಾರೆ. ಅವರ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಶೋಧ ಕಾರ್ಯವನ್ನು ನಾಳೆಯೂ ಮುಂದುವರಿಸಲಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.


ಪಣಂಬೂರು ಕಡಲ ಕಿನಾರೆ ಬಳಿ ವಿಹಾರಕ್ಕೆ ತೆರಳಿದ್ದ ಬಜಪೆ ಪೊರ್ಕೋಡಿಯ ಮಿಲನ್‌, ಲಿಖಿತ್ ಹಾಗೂ ನಾಗರಾಜ ಸಮುದ್ರ ಪಾಲಾಗಿದ್ದರು. ಮಿಲನ್‌ ಅವರು ಮೀಷೊ ಕಂಪನಿಯ ಸರಕು ವಿತರಕರಾಗಿದ್ದರು. ನಾಗರಾಜ್‌ ಅವರು ಬೈಕಂಪಾಡಿ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ಎಂಎಂಆರ್‌ ಕಂಪನಿಯಲ್ಲಿ ಮೇಲ್ವಿಚಾರಕರಾಗಿದ್ದರು. ಲಿಖಿತ್‌ ಕೈಕಂಬದ ರೋಸಾ ಮಿಸ್ಟಿಕಾ ಕಾಲೇಜಿನ ಪ್ರಥಮ ಪಿ.ಯು. ವಿದ್ಯಾರ್ಥಿ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *