DAKSHINA KANNADA
ವಿದ್ಯಾರ್ಥಿನಿಯರ ಮೇಲೆ ಆಸಿಡ್ ಎರಚಿದಾತನನ್ನು ಎನ್ ಕೌಂಟರ್ ಮಾಡಿ ; ಗಿರೀಶ್ ಮಟ್ಟಣ್ಣನವರ್
ಪುತ್ತೂರು : ಕಡಬ ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿಯ ಅಮಾನುಷ ಕೃತ್ಯ ಎಸಗಿದವನನ್ನು ಏನ್ ಕೌಂಟರ್ ಮಾಡಿ ಎಂದು ಮಾಜಿ ಪೊಲೀಸ್ ಅಧಿಕಾರಿ, ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾರೆ.
ಕಡಬ ಪೊಲೀಸ್ ಠಾಣೆಗೆ ಭೇಟಿ ಆ್ಯಸಿಡ್ ದಾಳಿ ಪ್ರಕರಣ ಸಮಗ್ರ ಮಾಹಿತಿ ಪಡೆದರು. ಈ ಸಂದರ್ಭ ಪ್ರತಿಕ್ರೀಯಿಸಿದ ಅವರು ಇಲ್ಲಿನ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ನಾವು ವಿನಂತಿ ಮಾಡುವುದೇನೆಂದರೆ ಆಸಿಡ್ ಎರಚಿ ಇಂತಹ ಕೃತ್ಯ ಎಸಗಿದಾತನನ್ನು ಎನ್ ಕೌಂಟರ್ ಮಾಡಿ, ಇಡೀ ಸಮಾಜ,ರಾಜ್ಯ ನಿಮ್ಮ ಜೊತೆಗೆ ಇರಲಿದೆ .ಈ ಹೆಣ್ಣು ಮಗಳು ಯಾರೋದೊ ಮಗಳು, ಯಾರೋದೋ ತಂಗಿ. ಇಂತವರಿಗೆ ಕಠಿಣ ಕಾನೂನು ಕ್ರಮ ಆಗದಿದ್ದರೆ ಇದೇ ರೀತಿ ಪುನರ್ ವರ್ರತನೆಯಾಗುತ್ತೆ ಎಂದು ಅಭಿಪ್ರಾಯಪಟ್ಟರು.
You must be logged in to post a comment Login