KARNATAKA
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಭಕ್ತದ ಪಾದ ತೊಳೆದು, ಎಣ್ಣೆ ಮಸಾಜ್ ಮಾಡಿದ ವಿನಯ್ ಗುರೂಜಿ..!
ಅವಧೂತ ವಿನಯ್ ಗುರೂಜಿ ಪಾದಯಾತ್ರಿಗಳ ಕಾಲು ತೊಳೆದು, ಪುಷ್ಪ ಹಾಕಿ ಪೂಜಿಸಿ ಬಳಿಕ ಎಣ್ಣೆ ಹಚ್ಚಿ ಮಸಾಜ್ ಮಾಡಿದ ವಿದ್ಯಮಾನ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು : ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಾಡಿನ ಅನೇಕ ಕಡೆಗಳಿಂದ ಪಾದಯಾತ್ರೆ ಮಾಡುವುದು ಹಿಂದಿನಿಂದಲೂ ಬಂದ ಪರಂಪರೆ, ಚಿಕ್ಕಮಗಳೂರು ಜಿಲ್ಲೆಯಿಂದ ಅನೇಕ ಭಕ್ತರು ತಂಡೋಪತಂಡವಾಗಿ ಶ್ರೀ ಕ್ಷೇತ್ರಕ್ಕೆ ಪ್ರತಿ ಶಿವರಾತ್ರಿ ಸಮಯ ಪಾದಯಾತ್ರೆ ಹೋಗುತ್ತಾರೆ.
ಶಿವರಾತ್ರಿ ದಿನದಂದು ಶ್ರೀ ಮಂಜುನಾಥನ ದರ್ಶನ ಪಡೆಯುತ್ತಾರೆ. ಮಂಗಳವಾರ ರಾತ್ರಿ ಇಂತಹುದೇ ಪಾದಯಾತ್ರೆಯ ತಂಡ ಮೂಡಿಗೆರೆ ತಾಲೂಕಿನ ನೀರುಗಂಡಿಯಲ್ಲಿ ವಾಸವಾಗಿದ್ದರು. ಈ ವೇಳೆ ಅವಧೂತ ವಿನಯ್ ಗುರೂಜಿ ಪಾದಯಾತ್ರಿಗಳ ಕಾಲು ತೊಳೆದು, ಪುಷ್ಪ ಹಾಕಿ ಪೂಜಿಸಿದರು. ಅವಧೂತ ವಿನಯ್ ಗುರೂಜಿ ಪಾದಯಾತ್ರಿಗಳ ಕಾಲು ತೊಳೆದು, ಪುಷ್ಪ ಹಾಕಿ ಪೂಜಿಸಿದರು. ಬಳಿಕ ಎಣ್ಣೆ ಹಚ್ಚಿ ಮಸಾಜ್ ಮಾಡಿದರು. ಅವಧೂತ ವಿನಯ್ ಗುರೂಜಿ ಗೆ ಶಾಸಕಿ ನಯನ ಮೋಟಮ್ಮ ಸಾಥ್ ನೀಡಿದರು. ಮೂಡಿಗೆರೆ ತಾಲೂಕಿನ ಸಾಮಾಜಿಕ ಸೇವಾ ಸಮಿತಿ ಪ್ರತಿ ವರ್ಷ ಧರ್ಮಸ್ಥಳ ಪಾದಯಾತ್ರಿಗಳಿಗೆ ಊಟ-ವಸತಿಗೆ ಸೌಲಭ್ಯ ಕಲ್ಪಿಸಿದೆ.
You must be logged in to post a comment Login