LATEST NEWS
ಅಪಘಾತದ ಭೀಕರತೆಗೆ ದೇಹದಿಂದ ಬೇರ್ಪಟ್ಟ ರುಂಡ… 3 ಗಂಟೆ ಹುಡುಕಾಟದ ಬಳಿಕ ಪತ್ತೆ….!!
ಪಾಲಕ್ಕಾಡ್ ಡಿಸೆಂಬರ್ 25: ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರವಾಹನ ಸವಾರ ಸಾವನಪ್ಪರಿದ ಘಟನೆ ಪಾಲಕ್ಕಾಡಿನ ಅಂಬಟ್ಟುಪಾಳ್ಯಂ ಬಾಲಕರ ಎಚ್ಎಸ್ಎಸ್ ಬಳಿ ಸೋಮವಾರ ನಸುಕಿನ ವೇಳೆ ನಡೆದಿದೆ. ಈ ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರನ ತಲೆ ದೇಹದಿಂದ ಬೆರ್ಪಟ್ಟಿದ್ದು, ಮೂರುವರೆ ಗಂಟೆ ಹುಡುಕಾಟದ ಬಳಿಕ ಪತ್ತೆಯಾಗಿದೆ.
ಮೃತರನ್ನು ಮಣಿಕಂದನ್ (43) ಎಂದು ಗುರುತಿಸಲಾಗಿದೆ. ಮಣಿಕಂದನ್ ಜೀವನೋಪಾಯಕ್ಕಾಗಿ ಮೀನು ಮಾರಾಟ ಮಾಡುತ್ತಿದ್ದರು. ಪುತ್ತುನಗರದಿಂದ ಚಿತ್ತೂರಿಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಸುಮಾರು 35 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಅಪಘಾತದಲ್ಲಿ ಮಣಿಕಂದನ್ ಅವರ ದೇಹವು ತುಂಡಾಗಿದೆ ದೇಹದಿಂದ ತಲೆ ಬೇರ್ಪಟ್ಟಿದ್ದು, ತಲೆಯನ್ನು ಮೂರುವರೆ ಗಂಟೆಗಳ ಹುಡುಕಾಟದ ಬಳಿಕ ಪತ್ತೆಯಾಗಿದೆ. ಕಾರನ್ನು ವಿಳಯೋಡಿ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದರು. ಮಣಿಕಂದನ್ ಅವರು ಪತ್ನಿ ಓಮನ ಮತ್ತು ಮಕ್ಕಳಾದ ಮನು ಮತ್ತು ಬಿನು ಅವರನ್ನು ಅಗಲಿದ್ದಾರೆ.
You must be logged in to post a comment Login