Connect with us

    LATEST NEWS

    ಓಖೀ ಚಂಡಮಾರುತ ಉಡುಪಿಯಲ್ಲೂ ಹೈಅಲರ್ಟ್: ಮಲ್ಪೆ ಬೀಚಿನಲ್ಲಿ ಪ್ರವಾಸಿಗರಿಗೆ ನಿರ್ಬಂಧ

    ಓಖೀ ಚಂಡಮಾರುತ ಉಡುಪಿಯಲ್ಲೂ ಹೈಅಲರ್ಟ್: ಮಲ್ಪೆ ಬೀಚಿನಲ್ಲಿ ಪ್ರವಾಸಿಗರಿಗೆ ನಿರ್ಬಂಧ

    ಉಡುಪಿ, ಡಿಸೆಂಬರ್ 02 : ಓಖೀ ಚಂಡಮಾರುತ ಹಿನ್ನಲೆಯಲ್ಲಿ ಉಡುಪಿ ಕರಾವಳಿಯಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಈ ಹಿನ್ನೆಲೆಯಲ್ಲಿ ಇಲ್ಲಿ ಮಲ್ಪೆ ಬೀಚಿನಲ್ಲಿ ಪ್ರವಾಸಿಗರಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

    ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಹಾಗೂ ವೇಗವಾಗಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಯಾರು ಕೂಡ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

    ಸಮುದ್ರದ ಮಧ್ಯೆಯಲ್ಲಿರುವ ಪ್ರಮುಖ ಯಾತ್ರಾ ಸ್ಥಳ ಸೈಂಟ್ ಮೇರಿಸ್ ಐ ಲ್ಯಾಂಡಿಗೆ ಬೋಟ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಮೀನುಗಾರಿಕೆ ಕೂಡ ಸ್ಥಗಿತಗೊಂಡಿದ್ದು, ಮೀನುಗಾರಿಕೆಗೆ ತೆರಳದೆ ಮಲ್ಪೆ ಬಂದರಿನಲ್ಲೆ ಮೀನುಗಾರಿಕಾ ದೋಣಿಗಳು ಲಂಗರು ಹಾಕಿವೆ.

    Share Information
    Advertisement
    Click to comment

    You must be logged in to post a comment Login

    Leave a Reply