Connect with us

    LATEST NEWS

    ತಮಿಳುನಾಡಿನಲ್ಲಿ ಸ್ಮೂತ್ ಪಾಲಿಟಿಕ್ಸ್ ಇಲ್ಲ ಅಲ್ಲಿ ಎಲ್ಲಾ ಪರ್ಸನಲ್ ಪಾಲಿಟಿಕ್ಸ್ – ಅಣ್ಣಾಮಲೈ

    ಉಡುಪಿ ಎಪ್ರಿಲ್ 17: ತಮಿಳುನಾಡಿನಲ್ಲಿ ನಡೆಯುತ್ತಿರುವ ಮಾನನಷ್ಟ ಮೊಕದ್ದಮೆ ಪಾಲಿಟಿಕ್ಸ್ ಕುರಿತಂತೆ ಉಡುಪಿಯ ಕಾಪುವಿನಲ್ಲಿ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ತಮಿಳುನಾಡಿನಲ್ಲಿ ಡಿಎಂಕೆ ವಿರುದ್ಧ ನಾವು ಗಂಭೀರವಾಗಿ ರಾಜಕೀಯ ಮಾಡುತ್ತಿದ್ದೇವೆ. ಈವರೆಗೆ ನನ್ನ ಮೇಲೆ 1300 ಕೋಟಿ ರೂಪಾಯಿ ಮಾನ ನಷ್ಟ ಮೊಕದ್ದಮೆ ಹಾಕಿದ್ದಾರೆ. ಡಿಎಂಕೆ 500, 300 ಕೋಟಿಯಷ್ಟು ಒಂದೊಂದು ಬಾರಿ ಮಾನನಷ್ಟ ಮೊಕದ್ದಮೆ ಹಾಕುತ್ತದೆ. ಡಿಎಂಕೆ ಬಳಿ ಬಹಳ ದುಡ್ಡಿರೋದ್ರಿಂದ ನೂರಾರು ಕೋಟಿ ಮೊಕದ್ದಮೆ ಹಾಕುತ್ತಿದ್ದಾರೆ ಎಂದರು.

    ಡಿಎಂಕೆ ಫೈಲ್ಸ್ ಅಂತ 11 ಮಂದಿ ನಾಯಕರ ಆಸ್ತಿ ವಿವರ ಬಿಡುಗಡೆ ಮಾಡಿದ್ದೇವೆ ಈ 11 ಜನರ ಬಳಿ 1 ಲಕ್ಷ 31 ಸಾವಿರ ಕೋಟಿ ರೂಪಾಯಿ ನಷ್ಟು ಪ್ರಾಪರ್ಟಿ ಇದೆ, ನಾನು ಇಂದು ಮೊದಲ ಹಂತದ ದಾಖಲೆ ಬಿಡುಗಡೆ ಮಾಡಿದ್ದೇನೆ. ಒಬ್ಬೊಬ್ಬ ಡಿಎಂಕೆ ನಾಯಕನ ಬಳಿ 50,000 ಕೋಟಿ ರೂಪಾಯಿ ಇದೆ. ಡಿ ಎಂ ಕೆ ಮೇಲೆ ನಾನು ಐನೂರು ಕೋಟಿಯ ಒಂದು ರೂಪಾಯಿ ಮಾನ ನಷ್ಟ ಮೊಕದ್ದಮೆ ಹಾಕಿದ್ದೇನೆ. ಆ ಹಣವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಕೊಡಿ ಎಂದು ಹೇಳಿದ್ದೇನೆ. ತಮಿಳುನಾಡಿನ ರಾಜಕೀಯವೇ ಹಾಗೆ ಬಹಳ ಅಗ್ರೆಸಿವ್ ಆಗಿ ಮಾಡಲೇಬೇಕು.

    ಪ್ರಧಾನಿ ನರೇಂದ್ರ ಮೋದಿಗೆ ದೊಡ್ಡ ಮಟ್ಟದ ಬೆಂಬಲ ತಮಿಳ್ನಾಡಿನಲ್ಲಿ ಇದೆ, ಕರ್ನಾಟಕದಲ್ಲಿ ಬಹಳ ಸ್ಮೂತ್ ಆಗಿ ಪಾಲಿಟಿಕ್ಸ್ ನಡೆಯುತ್ತದೆ, ತಮಿಳುನಾಡಿನಲ್ಲಿ ಸ್ಮೂತ್ ಪಾಲಿಟಿಕ್ಸ್ ಇಲ್ಲ , ಎಲ್ಲಾ ಪರ್ಸನಲ್ ಆಗಿ ಪಾಲಿಟಿಕ್ಸ್ ನಡೆಯುತ್ತದೆ. ರಾಜಕೀಯ ಪಕ್ಷದ ಬಳಿ ಮಾಧ್ಯಮಗಳಿವೆ. ರಾಜಕೀಯ ಪಕ್ಷಗಳು ಚಲನಚಿತ್ರವನ್ನು ನಿರ್ಮಾಣ ಮಾಡುತ್ತವೆ. ತಮಿಳ್ನಾಡಿನ ರಾಜಕೀಯದ ವಾತಾವರಣವೇ ವಿಭಿನ್ನ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply