Connect with us

LATEST NEWS

ಮತ್ತೆ ರಾಜ್ಯ ಸರಕಾರದ ಕರ್ಪ್ಯೂಗಳ ವಿರುದ್ದ ಅಸಮಧಾನ ವ್ಯಕ್ತಪಡಿಸಿದ ಬಿಜೆಪಿ ಶಾಸಕ ರಘುಪತಿ ಭಟ್

ಉಡುಪಿ ಎಪ್ರಿಲ್ 21: ಕೊರೊನಾದ ಎರಡನೇ ಅಲೆ ಹಿನ್ನಲೆ ರಾಜ್ಯಾದ್ಯಂತ ರಾತ್ರಿ ಕರ್ಪ್ಯೂ ಹಾಗೂ ವಿಕೇಂಡ್ ಲಾಕ್ ಡೌನ್ ಘೋಷಿಸಿರುವ ರಾಜ್ಯ ಸರಕಾರದ ವಿರುದ್ದ ಬಿಜೆಪಿಯ ಶಾಸಕ ರಘುಪತಿ ಭಟ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಉಡಪಿ ಹಾಗೂ ಮಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದು, ಈ ಎರಡು ಜಿಲ್ಲೆಗಳಲ್ಲಿ ವಿಕೆಂಡ್ ಕರ್ಪ್ಯೂ ಹಾಗೂ ನೈಟ್ ಕರ್ಪ್ಯೂವಿನ ಅಗತ್ಯ ಇಲ್ಲ, ಇದನ್ನು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

 


ಮಾಧ್ಯಮದೊಂದಿಗೆ ಮಾತನಾಡಿದ ಅವರು ಸರ್ಕಾರದ ನೂತನ ನಿಯಮಾವಳಿ ನೈಟ್ ಕರ್ಪ್ಯೂ ಹಾಗೂ ವಿಕೆಂಡ್ ಲಾಕ್ ಡೌನ್’ನಿಂದ ಜನತೆಗೆ ಪೂರ್ವ ನಿಗದಿತ ಧಾರ್ಮಿಕ ಮತ್ತು ಇತರ ಸಮಾರಂಭಗಳಿಗೆ ತೊಂದರೆಯಾಗಲಿದೆ. ಕೇಸ್ ಗಳ ಸಂಖ್ಯೆ ನಿಯಂತ್ರಣದಲ್ಲಿ ಇರುವ ಕಾರಣ ಉಡುಪಿ ಮಂಗಳೂರಿಗೆ ನೈಟ್ ಕರ್ಪ್ಯೂ ಅಗತ್ಯವೂ ಇಲ್ಲ. ಮದುವೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಕ್ಕೆ ಮೂಹೂರ್ತ ನಿಗದಿ ಮಾಡಿರುತ್ತಾರೆ. ಭಾನುವಾರ ತುಂಬಾ ಮದುವೆ ಕಾರ್ಯಕ್ರಮಗಳು ನಿಗದಿ ಆಗಿವೆ. ಆದರೆ ವಿಕೇಂಡ್ ಲಾಕ್ ಡೌನ್ ಇರುವುದರಿಂದ ತೊಂದರೆ ಆಗಲಿದೆ ಮದುವೆ ಸಮಾರಂಭಗಳಿಗೆ ತೆರಳುವವರಿಗೆ ಅನುಕೂಲವಾಗುವಂತೆ ಪಾಸ್ ವ್ಯವಸ್ಥೆಗೆ ಉಡುಪಿಯಲ್ಲಿ ಚಿಂತನೆ ನಡೆದಿದೆ ಎಂದು ಹೇಳಿದರು.


ಯಾವ ಜಿಲ್ಲೆಗಳಲ್ಲಿ ದಿನಕ್ಕೆ 1 ಸಾವಿರಕ್ಕಿಂತ ಕಡಿಮೆ ಕೇಸ್ ಇದೆಯೋ ಅಲ್ಲಿ ಕರ್ಫ್ಯೂ ಅಗತ್ಯ ಇಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿದ್ದು, ನಮ್ಮ ಜಿಲ್ಲೆಯಲ್ಲಿ ಆಸ್ಪತ್ರೆ, ಬೆಡ್ ಸೌಲಭ್ಯ, ಔಷಧಗಳ ಸಂಫೂರ್ಣ ವ್ಯವಸ್ಥೆ ಕೂಡಾ ಇದ್ದು ಅವಿಭಜಿತ ಜಿಲ್ಲೆಗೆ ನೂತನ ನಿಯಮವಾಳಿಯ ಅವಶ್ಯಕತೆ ಇಲ್ಲ ಎಂದು ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *