KARNATAKA
ಎಮರ್ಜೇನ್ಸಿ ಮೇಡೆ ಘೋಷಿಸಿ 168 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂ ಸ್ಪರ್ಶ

ಬೆಂಗಳೂರು ಜೂನ್ 21: ಇಂಡಿಗೋ ವಿಮಾನವೊಂದು ಎಮರ್ಜೇನ್ಸಿ ಮೇಡೆ ಸಂದೇಶ ಕಳುಹಿಸಿ ಬೆಂಗಳೂರು ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ಜೂನ್ 19 ರಂದು ನಡೆದಿದೆ.
ಚೆನ್ನೈ ಮತ್ತು ಗುವಾಹಟಿ ನಡುವಿನ ಇಂಡಿಗೊ ವಿಮಾನ 168 ಪ್ರಯಾಣಿಕರೊಂದಿಗೆ ತೆರಳುತ್ತಿದ್ದು, ವಿಮಾನದಲ್ಲಿ ಇಂಧನದ ಕೊರತೆ ಉಲ್ಲೇಖಿಸಿ ಫೈಲಟ್ ಕಂಟ್ರೋಲ್ ರೂಂಗೆ ಮೇಡೆ ಸಂದೇಶ ಕಳುಹಿಸಿದ್ದಾರೆ.

ಗುರುವಾರ ಸಂಜೆ 4-40ಕ್ಕೆ ಗುವಾಹಟಿಯಿಂದ ಟೇಕಾಪ್ ಆದ ಇಂಡಿಗೊ ವಿಮಾನದ (6ಇ-6764) ಪೈಲಟ್, ರಾತ್ರಿ 7-45ರ ಸುಮಾರಿನಲ್ಲಿ ಚೆನ್ನೈನಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಮಧ್ಯದಲ್ಲಿ ಇಂಧನದ ಕೊರತೆಯಿಂದ ಪೈಲಟ್ ಮೇಡೆ ಸಂದೇಶ ಕಳುಹಿಸಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿರುವುದಾಗಿ ತಿಳಿದುಬಂದಿದೆ. ಈ ವಿಮಾನದಲ್ಲಿ 168 ಪ್ರಯಾಣಿಕರು, ಇಬ್ಬರು ಪೈಲಟ್ , ಐವರು ಗಗನ ಸಖಿಯರು ಸೇರಿದಂತೆ 175 ಜನರಿದ್ದರು ಎನ್ನಲಾಗಿದೆ.
‘ಮೇಡೆ’ ಕರೆಯನ್ನು ಸ್ವೀಕರಿಸಿದ ನಂತರ ವಿಮಾನ ನಿಲ್ದಾಣದ ಸಿಬ್ಬಂದಿಗೆ ATC ಸೂಚನೆ ನೀಡಿತ್ತು. ವೈದ್ಯಕೀಯ ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ವಿಮಾನವು ರಾತ್ರಿ 8.20 ಕ್ಕೆ ಲ್ಯಾಂಡ್ ಆಯಿತು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದ ಮೂಲಗಳು ತಿಳಿಸಿವೆ
1 Comment