Connect with us

    LATEST NEWS

    ದಿನಕ್ಕೊಂದು ಕಥೆ- ದೂರುವುದು ಯಾರನ್ನ?

    ದೂರುವುದು ಯಾರನ್ನ?

    ರವಿಯಾಗಸದಿ ಮೂಡೋಕೆ ಇನ್ನೂ ಸಮಯವಿತ್ತು. ಆಗಲೇ ಮನೆಯಿಂದ ಹೊರಬಿದ್ದಿದ್ದ ಆತ. ಚಂದಿರನೇ ಅಸ್ಪಷ್ಟ ದಾರಿ ತೋರಿಸುತ್ತಿದ್ದ.ಗದ್ದೆಯ ಬದುವಿನಲ್ಲಿ ಸಾಗಿ ನೀರು ಬಿಟ್ಟ. ಗದ್ದೆ ಉತ್ತಾಯಿತು ,ಬಿತ್ತಾಯಿತು. ಮನೆಯ ಮಗನಂತೆ ಲಾಲಿಸಿ, ಕಲ್ಮಶಗಳನ್ನು ಕಿತ್ತು, ಗೊಬ್ಬರ ಹಾಕಿದ.

    ಇವನ ನೂರ್ಮಡಿ ಪ್ರೀತಿಗೆ ಪೈರುಗಳು ಮೇಲೆದ್ದು ನಿಂತವು. ಗಾಳಿಯೊಂದಿಗೆ ತಂಪಿನಿಂದ ತೂಗುತ್ತಿತ್ತು. ಪೈರುಗಳಿಂದ ಪಸಲು ರೈತನ ಮೊಗವ ನೋಡಲು ಉತ್ಸುಕತೆಯಿಂದ ಆಗಮಿಸಿದವು. ಕಟಾವಿನ ದಿನ ನಿಗದಿಯಾಯಿತು ,ಗದ್ದೆಯಲ್ಲಿ ಭತ್ತ ರಾಶಿ ಬಿತ್ತು. ಸಾಧನೆಗಳ ತುದಿಗೇರಿದರೂ ಮುಂದಿನ ಕ್ಷಣವನ್ನು ಅರಿಯದವರು ನಾವು.

    ಹಾಗೆಯೇ ಆ ದಿನ ನೀಲಾಕಾಶ ಕ್ಷಣದಲ್ಲಿ ಕಪ್ಪಡರಿ ಮಳೆಯನ್ನೆ ಸುರಿಸಿತು. ಇದೇನು ಮಳೆ ಸುರಿಸುವ ಕಾಲವೆಲ್ಲ . ಮನೆಯಿಂದ ಗದ್ದೆಗೆ ಕಾಲಿಡುವ ಮೊದಲೇ ನೀರಿಗೆ ಪಸಲು ನೆನೆದಿತ್ತು. ಹರಿಯುವ ಜಾಗದಲ್ಲಿ ಹರಿದಾಗಿತ್ತು. ಅವನ ಕಣ್ಣೀರಿನೊಂದಿಗೆ ಮಳೆಯು ಸೇರಿಹೋಯಿತು. ಅಯ್ಯೋ ಎನ್ನುತ್ತಾ ಸಿಕ್ಕವುಗಳನ್ನು ಬಳಸಿ ಒಂದೆಡೆ ಉಳಿಸುವ ಪ್ರಯತ್ನವಾದರೂ ವ್ಯರ್ಥ ಅನ್ನಿಸಿತು. ಗದ್ದೆಯ ಬದುವಿಗೊರಗಿ ಯೋಚಿಸಿದ.

    ಇಂದಿನ ಸ್ಥಿತಿಗೆ ದೂರುವುದಾದರೂ ಯಾರನ್ನು? ದೇವರನ್ನೋ? ಮನುಷ್ಯರನ್ನೋ?. ಊರಲ್ಲೊಂದು ದಾಸ್ತಾನು ಶೇಖರಣೆಗೆ ಜಾಗವಿಲ್ಲ, ಬತ್ತ ಬಿಡಿ ಯಾವುದೇ ಬೆಳೆಗೆ ನಿಗದಿಯಾದ ದರವಿಲ್ಲ .ಇಂದು ಖರೀದಿಸುವವರು ಇಲ್ಲವೆಂದು ನಾಳೆಗೆ ತೆಗೆದಿಡುವ ವ್ಯವಸ್ಥೆಯೂ ಇಲ್ಲ .ರೈತ ಅನ್ನೋದು ಅದೊಂದು ಪ್ರತಿಷ್ಠೆಯ ಕೆಲಸ ಆಗುವುದು ಯಾವಾಗ ?.ಇವನ ಯೋಚನಾಲಹರಿ ಹರಿದಿತ್ತು ,ಅತ್ತಕಡೆ ನೀರಿನೊಂದಿಗೆ ಬತ್ತವೂ

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply