Connect with us

    KARNATAKA

    ನೂತನ ಸಚಿವರಿಗೆ ಖಾತೆ ಹಂಚಿಕೆ..ನೂತನ ಸಚಿವ ಅಂಗಾರರಿಗೆ ಮೀನುಗಾರಿಕೆ

    ಬೆಂಗಳೂರು ಜನವರಿ 21: ಸಚಿವ ಸಂಪುಟ ವಿಸ್ತರಣೆ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಪೂರ್ಣಗೊಂಡಿದ್ದು, ರಾತ್ರೋರಾತ್ರಿ ಅಂಕಿತಕ್ಕಾಗಿ ರಾಜ್ಯಪಾಲರಿಗೆ ರವಾನಿಸಲಾಗಿದೆ. ಇಂದು ಬಹುತೇಕ ಎಲ್ಲ ನೂತನ ಸಚಿವರಿಗೆ ಖಾತೆ ಸಿಗಲಿದೆ.
    ಈ ಬಾರಿ ಖಾತೆ ಹಂಚಿಕೆಯಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಅಲ್ಲದೆ. ಕೆಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ. ಇನ್ನು ಸುಳ್ಯದ ಶಾಸಕ ಎಸ್. ಅಂಗಾರ ಅವರಿಗೆ ಬಂದರು ಮತ್ತು ಮೀನುಗಾರಿಕೆ ಖಾತೆ ದೊರೆತಿದೆ. ಈ ಹಿಂದೆ ಇದು ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿ ಇತ್ತು.


    ಎಸ್‌. ಅಂಗಾರ (ಬಂದರು ಮತ್ತು ಮೀನುಗಾರಿಕೆ),
    ಕೋಟ ಶ್ರೀನಿವಾಸ ಪೂಜಾರಿ (ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ),
    ಉಮೇಶ್‌ ಕತ್ತಿ (ಆಹಾರ, ನಾಗರಿಕ ಪೂರೈಕೆ ಇಲಾಖೆ),
    ಬಸವರಾಜ ಬೊಮ್ಮಾಯಿ (ಗೃಹ, ಕಾನೂನು, ಸಂಸದೀಯ ವ್ಯವಹಾರ), ಜೆ.ಸಿ.ಮಾಧುಸ್ವಾಮಿ (ವೈದ್ಯಕೀಯ ಶಿಕ್ಷಣ, ಕನ್ನಡ-ಸಂಸ್ಕೃತಿ ಇಲಾಖೆ),
    ಬಿ.ಸಿ.ಪಾಟೀಲ್‌ (ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ)
    ಅರವಿಂದ ಲಿಂಬಾವಳಿ (ಅರಣ್ಯ),
    ಮುರುಗೇಶ್‌ ನಿರಾಣಿ (ಗಣಿ, ಭೂ ವಿಜ್ಞಾನ),
    ಎಂಟಿಬಿ ನಾಗರಾಜ್‌ (ಅಬಕಾರಿ),
    ಡಾ| ಕೆ. ಸುಧಾಕರ (ಆರೋಗ್ಯ),
    ಆನಂದ್‌ ಸಿಂಗ್‌ (ಪ್ರವಾ ಸೋದ್ಯಮ, ಪರಿಸರ ಇಲಾಖೆ),
    ಸಿ. ಪಿ. ಯೋಗೇಶ್ವರ್‌ (ಸಣ್ಣ ನೀರಾವರಿ),
    ಆರ್‌. ಶಂಕರ್‌(ಪೌರಾಡಳಿತ ಹಾಗೂ ರೇಷ್ಮೆ ಇಲಾಖೆ),
    ಗೋಪಾಲಯ್ಯ (ತೋಟಗಾರಿಕೆ, ಸಕ್ಕರೆ),
    ಕೆ.ಸಿ. ನಾರಾಯಣ ಗೌಡ(ಯುವ ಸಬಲೀಕರಣ, ಕ್ರೀಡೆ, ಹಜ್‌ ಮತ್ತು ವಕ್ಫ್) ಖಾತೆ ನೀಡಲಾಗುತ್ತದೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply