LATEST NEWS
ಕಾಂಗ್ರೇಸ್ ಮುಖಂಡ ನಾರಾಯಣ ಸ್ವಾಮಿ ವರ್ತನೆ ಒಂದು ರೀತಿಯ ಭಯೋತ್ಪಾದನೆ- ಆಯನೂರು ಮಂಜುನಾಥ
ಕಾಂಗ್ರೇಸ್ ಮುಖಂಡ ನಾರಾಯಣ ಸ್ವಾಮಿ ವರ್ತನೆ ಒಂದು ರೀತಿಯ ಭಯೋತ್ಪಾದನೆ- ಆಯನೂರು ಮಂಜುನಾಥ
ಉಡುಪಿ ಫೆಬ್ರವರಿ 22: ಕಾಂಗ್ರೇಸ್ ಮುಖಂಡ ನಾರಾಯಣ ಸ್ವಾಮಿ ವರ್ತನೆ ಒಂದು ರೀತಿಯ ಭಯೋತ್ಪಾದನೆ ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೇಸ್ ನವರಿಗೆ ಇಂಟೆಲಿಜೆನ್ಸ್ ಅವರು ಚುನಾವಣೆಯಲ್ಲಿ ಸೋಲುವ ಸೂಚನೆ ನೀಡಿರಬೇಕು ಹಿಗಾಗಿ ಸಂಪೂರ್ಣ ಅಪ್ ಸೆಟ್ ಆಗಿರುವ ಕಾಂಗ್ರೇಸ್ ನವರು ಅಧಿಕಾರಿಗಳನ್ನು ಬೆದರಿಸಿ ಬೇಕಾದ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೇಸ್ ಶಾಸಕ ಹ್ಯಾರಿಸ್ ನ ಪುತ್ರನ ಪ್ರಕರಣದ ಬಗ್ಗೆ ಮಾತನಾಡಿದ ಅವರ ಕಾಂಗ್ರೇಸ್ ಅಂದ್ರೆ ಗೂಂಡಾರಾಜ್ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಹೇಳಿದರು.
ಮನ್ ಕೀ ಬಾತ್ ನಲ್ಲಿ ನೀರವ್ ಮೋದಿ ಬಗ್ಗೆ ಮಾತಾಡಿ ಎಂದು ಸಲಹೆ ನೀಡುವ ರಾಹುಲ್ , ಕಳೆದ ಬಾರಿಯ ಬಜೆಟ್ ಅಧಿವೇಶನದ್ಲೇ ಇರಲಿಲ್ಲ, ವಿದೇಶಕ್ಕೆ ಅಬ್ಸ್ಕಾಂಡಿಂಗ್ ಆಗಿದ್ರು, ರಾಹುಲ್ ಎಲ್ಲಿದ್ದರು ಅಂತ ಕಾಂಗ್ರೆಸ್ ನ ಯಾವ ನಾಯಕನಿಗೂ ಗೊತ್ತಿರಲಿಲ್ಲ ಎಂದು ಲೆವಡಿ ಮಾಡಿದರು.
You must be logged in to post a comment Login