Connect with us

    LATEST NEWS

    ಹಳೆ ನೈತಿಕ ಪೊಲೀಸ್ ಗಿರಿ ಆರೋಪಿಗಳಿಂದ ಮುಚ್ಚಳಿಕೆ

    ಮಂಗಳೂರು ಜೂನ್ 04: ಸೋಮೇಶ್ವರ ಬೀಚ್ ನಲ್ಲಿ ಅನೈತಿಕ ಪೊಲೀಸ್‌ ಗಿರಿ ಪೊಲೀಸ್ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಬೆನ್ನಲ್ಲೇ ಇಂಥ ಪ್ರಕರಣಗಳು ನಡೆಯದಂತೆ ಮಂಗಳೂರು ನಗರ ಪೊಲೀಸ್ ಕಮಿಷನ‌ರ್ ಕುಲದೀಪ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.


    ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ ನಡೆದ ಅನೈತಿಕ ಪೊಲೀಸ್‌ ಗಿರಿ ಪ್ರಕರಣಗಳಲ್ಲಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲರನ್ನು ಗುರುತಿಸಲಾಗಿದ್ದು,ಇನ್ಮುಂದೆ ಇಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಅವರಿಂದ ಮುಚ್ಚಳಿಕೆ ಬರೆಸಲಾಗುತ್ತದೆ.


    ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದ ಕುಲದೀಪ್ ಕುಮಾರ್ ಜೈನ್‌, ಅನೈತಿಕ ಪೊಲೀಸ್‌ ಗಿರಿ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಸಿಆರ್ ಸಿ 107 ಮತ್ತು 110 ಅಡಿಯಲ್ಲಿ ಪ್ರಿವೆಂಟಿವ್ ಕೇಸ್ ದಾಖಲಿಸಲಾಗುತ್ತದೆ. ಈ ಮುಚ್ಚಳಿಕೆಯ ಅವಧಿ ಒಂದು  ವರ್ಷವಾಗಿದ್ದು, ಮತ್ತೆ ವಿಸರಣೆ ಮಾಡಲಾ ಗುತ್ತದೆ. ಈ ಅವಧಿಯಲ್ಲಿ ಮುಚ್ಚಳಿಕೆಯನಿಯಮ ಮೀರಿ ಕಾನೂನು ಉಲ್ಲಂಘಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ಕಳೆದ ಒಂದು ವರ್ಷದಲ್ಲಿ ಉಲ್ಲಂಘಿಸಿದ 9 ಮಂದಿಯಿಂದ ನಗದ ಪೊಲೀಸರು 1,90 ಲಕ್ಷ ರು. ವಸೂಲಿ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply